ನಿನ್ನ ಜೊತೆ ಮಾತನಾಡುವುದು ಇದೆ, ಪಾರ್ಕಿಗೆ ಬಾ: ಪ್ರೀತಿಸು ಎಂದು ದಂಬಾಲು ಬಿದ್ದಿದ್ದ ಯುವಕನನ್ನು ಬಂಧಿಸಿದ ಪೊಲೀಸರು

ಪಾರ್ಕಿಗೆ ಕರೆದೊಯ್ದು ಅಸಭ್ಯ ವರ್ತನೆ: ಬಾಲಕಿಯ ತಂದೆ ಬಂದ ಬಳಿಕ ಓಡಿಹೋಗಿದ್ದ

ಶಿರಸಿ: ತಾಲೂಕಿನಲ್ಲಿ ಇತ್ತಿಚೆಗೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಪ್ರೀತಿ, ಪ್ರೇಮ, ಪ್ರಣಯದ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಮನೆಯವರು ತಮ್ಮ ಮಕ್ಕಳ ಮೇಲೆ ನಿಗಾ ಇಡಬೇಕಾದ ಪರಿಸ್ಥಿತಿ ಬಂದಿದೆ. ಶಾಲಾ ಕಾಲೇಜಿಗೆ ಹೋಗುವಾಗ ಮಕ್ಕಳ ಮೇಲೆ ನಿಗಾ ಇಡುವುದರ ಜೊತೆ ಅವರಿಗೆ ತಮ್ಮ ತಮ್ಮ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ.

ಹೌದು, ಬಾಲಕಿಗೆ ಪ್ರೀತಿಸು ಎಂದು ದಂಬಾಲು ಬಿದ್ದಿದ್ದ ಯುವಕನನ್ನು ಬಂಧಿಸಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಮೌಲಾ ಅಲಿ ದಾದೆ ಖಾನ್ ( 25 ವರ್ಷ ) ಬಂಧಿತ ಆರೋಪಿ. ಇಲ್ಲಿನ ಉದ್ಯಾನವನಕ್ಕೆ ಬಾಲಕಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ, ನನ್ನನ್ನು ಪ್ರೀತಿಸು ಎಂದು ಆಕೆಯನ್ನು ಒತ್ತಾಯಿಸಿದ್ದ ಎಂಬ ಆರೋಪ ಕೇಳಿಬಂದಿದೆ.

ಬಾಲಕಿ ಪಾರ್ಕ್ನಲ್ಲಿ ಇರುವ ವಿಷಯ ತಿಳಿದ ಮನೆಯರು, ಅಲ್ಲಿಗೆ ಬಂದಾಗ ಆರೋಪಿ ಸ್ಥಳದಿಂದ ಓಡಿಹೋಗಿದ್ದ. ಈ ಕುರಿತು ಬಾಲಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಮೂಲತಹ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮೌಲಾ ಅಲಿ ದಾದೆ ಖಾನ್ (26) ಬಂಧಿತ , ಬಾಲಕಿಯನ್ನು ಪರಿಚಯ ಮಾಡಿಕೊಂಡು ನಿನ್ನ ಜೊತೆ ಮಾತನಾಡುವುದಿದೆ ಎಂದು ನಂಬಿಸಿ , ಆಕೆಯೊಂದಿಗೆ ಅಸಭ್ಯ ವರ್ತನೆ ತೊರಿದ್ದಾನೆ. ಬಾಲಕಿಯ ತಂದೆ ಬಂದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇದೀಗ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜುರು ಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version