Follow Us On

WhatsApp Group
Important
Trending

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಸಾವಿಗೆ ಶರಣು

ಕುಮಟಾ: ಚಲಿಸುತ್ತಿದ್ದ ರೈಲ್ವೆಗೆ ತಲೆ ಕೊಟ್ಟು ವ್ಯಕ್ತಿಯೋರ್ವ ಸಾವಿಗೆ ಶರಣಾದ ಘಟನೆ ಪಟ್ಟಣದ ಗುಡಾಳದಲ್ಲಿ ರಾತ್ರಿ ಸಂಭವಿಸಿದೆ. ಕುಮಟಾ ಪಟ್ಟಣದ ಎಪಿಎಂಸಿ ಸಮೀಪದ ನಿವಾಸಿ ಸಂಜಯ ಶೇಖರಪ್ಪ ಹುಣಸವಾರ್ (30) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ. ಈತ ಕಳೆದ ಕೆಲ ದಿನಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದು, ಗುಡಾಳ ಬಳಿ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

Back to top button