ಆಭರಣ ತೊಳೆದುಕೊಡುವುದಾಗಿ ನಂಬಿಸಿ ಮಹಿಳೆಗೆ ಮೋಸ: ಮಾಂಗಲ್ಯ ಸರ ಎಗರಿಸಿ ಪರಾರಿಯಾದ ದುಷ್ಕರ್ಮಿಗಳು

ಕಾರವಾರ: ಅಂಗನವಾಡಿ ಕಾರ್ಯಕರ್ತೆಗೆ ಬಂಗಾರದ ಆಭರಣ ತೊಳೆದುಕೊಡುವುದಾಗಿ ನಂಬಿಸಿದ ಅಪರಿಚಿತರು 35-40ಗ್ರಾಂ ತೂಕದ ಮಂಗಳ ಸೂತ್ರ ಕದ್ದು, ಸ್ಥಳದಿಂದ ಪರಾರಿಯಾದ ಘಟನೆ ಯಲ್ಲಾಪುರ ಪಟ್ಟಣದ ಹೊಸ ಓಣೆಯ ಬಸವೇಶ್ವರ ನಗರದ ಅಂಗನವಾಡಿಯಲ್ಲಿ ನಡೆದಿದೆ. ಅಂಗನವಾಡಿಗೆಗೆ ಬಂದ ಅಪರಿಚಿತ ವ್ಯಕ್ತಿಗಳು ಅಂಗನವಾಡಿ ಕಾರ್ಯಕರ್ತೆ ಶಾಂತಾ ಬುದ್ದಿಯವರ ಬಳಿ ತಾಳಿಯನ್ನು ತೊಳೆದುಕೊಡುವುದಾಗಿ ಹೇಳಿ, ನಂಬಿಸಿದ್ದಾರೆ. ಮೊದಲು ಬೆಳ್ಳಿಯ ಚೈನ್ ಮೊದಲು ತೊಳೆದು ಕೊಡುವಂತೆ ಹೇಳಿದ್ದಾರೆ. ಈ ವೇಳೆ ಅಪರಿಚಿತರು ಬೆಳ್ಳಿಚೈನ್ ತೊಳೆದುಕೊಟ್ಟಿದ್ದಾರೆ. ನಂತರ ಅವರ ಕೈಗೆ ಅಪರಿಚಿತ ವ್ಯಕ್ತಿಗಳು ಯಾವುದೋ ಪುಡಿಯನ್ನು ಕೊಟ್ಟಿದ್ದಾರೆ.

ನಂತರ ಅಲ್ಲಿದ್ದ ಕುಕ್ಕರಿಲ್ಲಿ ಆಭರಣ ಹಾಕುವಂತೆ ಅದರ ಜೊತೆಗೆ ಪುಡಿಯನ್ನು ಹಾಕಿ ತೊಳೆಯುವುದಾಗಿ ಹೇಳಿದ್ದಾರೆ. ಈ ವೇಳೆ ಯಾರಿಗೂ ತಿಳಿಯದಂತೆ ಮಾಂಗಲ್ಯದ ಸರವನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡ ಅಪರಿಚಿತರು, ಕುಕ್ಕರಿನಲ್ಲಿ ಪುಡಿ ಮತ್ತು ನೀರು ಹಾಕಿ ಕುದಿಸಿ ಸ್ವಲ್ಪ ಹೊತ್ತಿನ ಬಳಿಕ ತೆಗೆಯುವಂತೆ ಸೂಚಿಸಿ ಅಲ್ಲಿಂದ ಕಾಲು ಕಿತ್ತಿದ್ದಾರೆ. ಕೆಲ ಸಮಯದ ನಂತರ ಅಂಗನವಾಡಿ ಕಾರ್ಯಕರ್ತೆಯು ಕುಕ್ಕರ್ ತೆಗೆದು ನೋಡಿದಾಗ ಬಂಗಾರದ ಆಭರಣಗಳು ಇಲ್ಲದಿರುವುದು ಕಂಡು ಗಲಿಬಿಲಿಗೊಂಡು ಕಾರ್ಯಕರ್ತೆ ಹಾಗೂ ಸಹಾಯಕಿಯು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಾಹಿತಿ ಪಡೆದಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091

Exit mobile version