Follow Us On

WhatsApp Group
Important
Trending

ಅಡ್ಡ ಬಂದ ಎಮ್ಮೆ ತಪ್ಪಿಸಲು ಹೋಗಿ ಬೆಲ್ಲದ ವಾಹನ ಗದ್ದೆಯಲ್ಲಿ ಪಲ್ಟಿ: ಚಾಲಕನಿಗೆ ಗಾಯ

ಯಲ್ಲಾಪುರ: ಬೆಲ್ಲ ತುಂಬಿಕೊಂಡು ಹೋಗುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗದ್ದೆಯಲ್ಲಿ ಬಿದ್ದಿದೆ. ಈ ಘಟನೆ ನಡೆದಿರೋದು ಪಟ್ಟಣದ ಕಲ್ಮಠದ ಸಮೀಪಸ ಆನಗೋಡ ರಸ್ತೆಯಲ್ಲಿ.

ರಸ್ತೆಗೆ ಕಾಂಕ್ರೀಟ್ ಹಾಕಲಾಗಿದ್ದು, ರಸ್ತೆಯ ಅಕ್ಕಪಕ್ಕದಲ್ಲಿ ಮಣ್ಣನ್ನು ಹಾಕದೆ ಇರುವ ಕಾರಣ ಚಾಲಕ ವಾಹನವನ್ನು ರಸ್ತೆ ಪಕ್ಕಕ್ಕೆ ಇಳಿಸಿದಾಗ ನಿಯಂತ್ರಣ ತಪ್ಪಿದೆ. ಈ ವೇಳೆ ವಾಹನ ಗದ್ದೆಗೆ ಪಲ್ಟಿಯಾಗಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೆಲ್ಲ ತುಂಬಿಕೊಂಡು ಹೋಗುತ್ತಿದ್ದ ವಾಹನಕ್ಕೆ ಅಡ್ಡಲಾಗಿ ಎಮ್ಮೆಯೊಂದು ಬಂದಿದ್ದರಿಂದ ಆ ಎಮ್ಮೆಯನ್ನು ತಪ್ಪಿಸಲು ಹೋದಾಗ ಘಟನೆ ನಡೆದಿದೆ ಎನ್ನಲಾಗಿದೆ. ವಾಹನದಲ್ಲಿದ್ದ ಬೆಲ್ಲದ ಡಬ್ಬಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ವಿಸ್ಮಯ ನ್ಯೂಸ್ ಯಲ್ಲಾಪುರ

Back to top button