
ಆರೋಪಿಯ ಪತ್ತೆಗೆ ಬಲೆ ಬೀಸಿದ ಪೊಲೀಸರು
ಗಂಧದ ಗಿಡ ಕಳ್ಳನತ ಪ್ರಕರಣದಡಿ ಬಂಧಿತನಾಗಿದ್ದ
ಕಾರವಾರ: ಕರೊನಾ ಸೋಂಕು ದೃಢಪಟ್ಟ ಆರೋಪಿಯೊಬ್ಬ ಕ್ರಿಮ್ಸ್ ಐಸಿಯು ವಾರ್ಡ್ ನಿಂದ ತಪ್ಪಿಸಿಕೊಂಡ ಘಟನೆ ನಡೆದಿದೆ. ಸೈಯದ್ (25) ಕ್ರಿಮ್ಸ್ ನಿಂದ ತಪ್ಪಿಸಿಕೊಂಡ ಆರೋಪಿ. ಮುಂಡಗೋಡದಲ್ಲಿ ಕಳೆದ ಎರಡು ದಿನಗಳ ಹಿಂದೆ ಗಂಧದ ಗಿಡ ಕಳ್ಳನತಕ್ಕೆ ಸಂಬoಧಿಸಿದoತೆ ಅರಣ್ಯ ಇಲಾಖೆಯ ಪ್ರಕರಣದಡಿ ಬಂಧಿತನಾಗಿದ್ದ.
ಈ ಸಂದರ್ಭದಲ್ಲಿ ಆರೋಪಿಗೆ ಕೋವಿಡ್ ತಪಾಸಣೆ ಮಾಡಲಾಗಿತ್ತು. ಕೊವಿಡ್ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಕಾರವಾರದ ಕ್ರಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಕ್ರಿಮ್ಸ್ ಐಸಿಯುನಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಆರೋಪಿಯು ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ.
ತಪ್ಪಿಸಿಕೊಂಡ ಆರೋಪಿಯ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ. ಈ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಮಾನಿನಿಯರ ಮೋಹದ ಜಾಲಕ್ಕೆ ಬಿದ್ದವರ ನೆರವಿನಿಂದ ಪಾಕಿಸ್ತಾನಕ್ಕೆ ರವಾನೆಯಾಯ್ತೆ ನೌಕಾನಲೆಯ ಗುಪ್ತ ಮಾಹಿತಿ ? NIA ಅಧಿಕಾರಿಗಳ ದಾಳಿ , ಇಬ್ಬರ ಬಂಧನ ?
- ಟ್ಯಾಂಕರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಬೈಕ್ : ಚಿಕಿತ್ಸೆ ಸ್ಪಂದಿಸದೆ ಸವಾರ ಸಾವು
- ಆಕಸ್ಮಿಕ ಬೆಂಕಿ: ವಾಸದ ಮನೆ ಸುಟ್ಟು ಸಂಪೂರ್ಣ ಭಸ್ಮ
- ಶಿರಕುಳಿಯಲ್ಲಿ ತಲೆ ಎತ್ತಿ ನಿಂತ ಕಾನದೇವಿಯ ಭವ್ಯ ದೇಗುಲ : ಫೆ 18 ರಿಂದ 23 ರ ವರೆಗೆ ಲೋಕಾರ್ಪಣೆ ಮತ್ತು ಶಿಲಾ ವಿಗ್ರಹ ಪ್ರತಿಷ್ಠಾಪನೆ