ನೂತನ ವಧು – ವರರ, ‘ಪುನೀತ’ ಅಭಿಮಾನ : ನೇತ್ರದಾನದ ವಾಗ್ದಾನ ಮಾಡಿದ ಅಪರೂಪದ ಜೋಡಿ

ಅಂಕೋಲಾ:  ನವ ದಂಪತಿಗಳು ನೇತ್ರದಾನದ ವಾಗ್ದಾನ ಮಾಡಿ, ತಮ್ಮ ಮದುವೆಯ ದಿನವನ್ನು ಪುನೀತ್ ರಾಜಕುಮಾರ ಅಭಿಮಾನದೊಂದಿಗೆ, ದೃಷ್ಟಿಹೀನರಿಗೆ ಬೆಳಕಾಗುವ ಸಂಕಲ್ಪದೊಂದಿಗೆ,  ವೈಶಿಷ್ಟ್ಯಪೂರ್ಣವಾಗಿ ನೆನಪಿಡುವಂತೆ ಮಾಡಿದ್ದಾರೆ..ಅಂಕೋಲಾ ತಾಲೂಕಿನ ಮಂಜಗುಣಿಯ ಕ್ರಿಯಾಶೀಲ ಯುವಕ  ಮಣಿಕಂಠ ಮಹಾಬಲೇಶ್ವರ ನಾಯ್ಕ, ಭಟ್ಕಳದ ಸಿಂಧು  ಮಾಸ್ತಪ್ಪ ನಾಯ್ಕ ಅವರೊಂದಿಗೆ ಸಪ್ತಪದಿ ತುಳಿದು , ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಹಿರಿಯರ ಮತ್ತು ಬಂಧು – ಮಿತ್ರರ ಶುಭಾಶೀರ್ವಾದ ಪಡೆದ ನೂತನ ಜೋಡಿ, ಮದುವೆ ದಿಬ್ಬಣದೊಂದಿಗೆ ಮಂಜಗುಣಿ ಗ್ರಾಮಕ್ಕೆ ಬರುತ್ತಲೇ ನೇರವಾಗಿ, ಇತ್ತೀಚೆಗೆ ಗ್ರಾಮದ ಮುಖ್ಯ ರಸ್ತೆ ಅಂಚಿಗೆ ಭವ್ಯವಾಗಿ ನಿರ್ಮಿಸಲ್ಪಟ್ಟ  ಪುನೀತ್ ರಾಜಕುಮಾರ್ ಅವರ ಪುತ್ಥಳಿ ಬಳಿ ತೆರಳಿ ,ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅಲ್ಲಿಯೇ ತಮ್ಮ ನೇತ್ರದಾನದ ವಾಗ್ದಾನ ಮಾಡಿ,ಪುನೀತ್ ಮೇಲಿನ ಅಭಿಮಾನ ಹಾಗೂ ಸಾಮಾಜಿಕ ಕಳಕಳಿ ಪ್ರದರ್ಶಿಸಿ ಹಲವರ ಮೆಚ್ಚುಗೆಗೆ ಕಾರಣವಾದರು.

ಈ ವಿಶೇಷ ಸಂದರ್ಭಕ್ಕೆ  ಮಂಜಗುಣಿ ಪುನಿತ್ ರಾಜಕುಮಾರ್ ಅಭಿಮಾನಿ ಬಳಗದ ಗೌರವಾಧ್ಯಕ್ಷ ಶ್ರೀಪಾದ ನಾಯ್ಕ, ಅಧ್ಯಕ್ಷ ನಾಗರಾಜ ಮಂಜಗುಣಿ, ಕುಟುಂಬಸ್ಥರಾದ ಗಜಾನನ ನಾಯ್ಕ, ನಾಗರಾಜ ನಾಯ್ಕ, ಮಧುಶ್ರೀ ನಾಯ್ಕ, ಮಮತಾ ನಾಯ್ಕ, ಆನಂದಿ ನಾಯ್ಕ, ವಿಜಯಲಕ್ಷ್ಮಿ ನಾಯ್ಕ, ಎಸ್. ಆರ್. ಇಳಿಗೇರ್, ಡಾ.ಶ್ರೀಧರ, ಡಾ.ಶಕುಂತಲಾ, ಇತರರು ಸಾಕ್ಷಿಯಾದರು. ಹೊಸ ಬಾಳಿನ ಹೊಸಿಲಲಿ ನಿಂತಿರುವ ಈ ಜೋಡಿ,ದೃಷ್ಟಿಮಾಂಧ್ಯರ  ಬಾಳಿಗೆ ಬೆಳಕಾಗಲು ನೇತ್ರದಾನದ ವಾಗ್ದಾನ ಮಾಡಿ ಗಮನಸೆಳೆದಿದ್ದು,ಈ ಜೋಡಿಗೆ ಶುಭ ಹಾರೈಸೋಣ .   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version