ಕಾರುಗಳ ನಡುವೆ ಡಿಕ್ಕಿ: ಚಾಲಕ ಸ್ಥಳದಲ್ಲೇ ಸಾವು: 6 ಜನರಿಗೆ ಗಾಯ

ಸಿದ್ದಾಪುರ: ಇನ್ನೋವಾ ಹಾಗು ಇಕೋ ನಡುವೆ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿ ಆರು ಮಂದಿ ಗಾಯಗೊಂಡ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ತಾಲೂಕಿನ ವಂದಾನೆ ಹತ್ತಿರದ ಶಿರೂರು ಕ್ರಾಸ್ ಬಳಿ ದುರ್ಘಟನೆ ನಡೆದಿದ್ದು, ಸಿದ್ದಾಪುರದಿಂದ ಕುಮಟಾಕ್ಕೆ ಹೋಗುತ್ತಿದ್ದ ಇನ್ನೋವ ಕಾರು ಹಾಗು ಕುಮಟಾ ವಂದಾನೆಯ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ ಮಾರುತಿ ಈಕೋ ಕಾರಿಗೆ ಡಿಕ್ಕಿ ಯಾಗಿದೆ.

ಇನ್ನೊವಾ ಕಾರು ಚಾಲಕನ ಅತಿವೇಗದ ಹಾಗು ನಿಷ್ಕಾಳಜಿತನದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮಾರುತಿ ಈಕೋ ಕಾರಿನ ಚಾಲ ಮಂಜುನಾಥ್ ತಂದೆ ಬೆಳ್ಳಾ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈತ ಸಿದ್ದಾಪುರದ ಕಬ್ಬಿನ ಮನೆ ಮುಳುಗುಂದ ನಿವಾಸಿ ಎಂದು ತಿಳಿದುಬಂದಿದೆ.

ಘಟನೆ ಯಲ್ಲಿ ಮಂಜುಳ ಗೌಡ, ಮೋಹಿನಿ ಗೌಡ, ಪ್ರತಿಕ್ಷ ಗೌಡ, ಪರಮಿ ಗೌಡ, ಅವರಿಗೆ ತೀವ್ರ ತರದ ಗಾಯ ಗಳಾಗಿದೆ. ಇನ್ನೂವಾ ಕಾರಿನಲ್ಲಿ ಪ್ರಯಾಣಿಸುತ್ತಿದ ಗಣಪತಿ ರಾಮರಾಯ ರೇವಣಕರ್ಸು,ರೇಖಾ ಇವರಿಗೂ ಗಾಯಗಳಾಗಿವೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version