ಭೀಕರ ರಸ್ತೆ ಅಪಘಾತ : ಸ್ಥಳದಲ್ಲೇ ಮೃತಪಟ್ಟ ಬೈಕ್ ಸವಾರು: ಅಪಘಾತ ಪಡಿಸಿದ ಲಾರಿ ಚಾಲಕ ಗಾಡಿ ಬಿಟ್ಟು ಓಡಿ ಪರಾರಿ  

ಅಂಕೋಲಾ : ಅಂಕೋಲಾ – ಯಲ್ಲಾಪುರ ಮಾರ್ಗ ಮಧ್ಯೆ ಕಂಚಿನಬಾಗಿಲ- ಬೊಗ್ರಿಬೈಲ್ ಸರಹದ್ದು ಪ್ರದೇಶದಲ್ಲಿ ಭಾರೀ ಲಾರಿಯೊಂದು ಬೈಕಗೆ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೀರ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಲೂಕಿನ ಅಗಸೂರ ನಿವಾಸಿಗಳಾದ ಬೊಮ್ಮಯ್ಯ ನಾಯಕ ಮತ್ತು ನಾರಾಯಣ ನಾಯಕ ಮೃತ ದುರ್ದೈವಿಗಳಾಗಿದ್ದಾರೆ.

ಓವರ್ ಟೇಕ್ ಮಾಡುವ ಭರದಲ್ಲಿ ಇಲ್ಲವೇ ಅಜಾಗರೂಕತೆಯಿಂದ ಚಾಲನೆ ಮಾಡಿದ ಲಾರಿ ಚಾಲಕ ಬೈಕ್ ಗೆ ಜೋರಾಗಿ ಹಿಂಬದಿಯಿಂದ ಡಿಕ್ಕಿ ಪಡಿಸಿದ್ದ ಎನ್ನಲಾಗಿದ್ದು,ಬೈಕ್ ಸವಾರರಿಬ್ಬರೂ ಲಾರಿಯ ಚಕ್ರದಡಿ ಸಿಲುಕಿ ಸುಮಾರು ಹತ್ತಿಪ್ಪತ್ತು ಮೀಟರ್ ನಷ್ಟು ದೂರ ತಳ್ಳಲ್ಪಟ್ಟಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಅಪಫಾತ ಪಡಿಸಿದ ಲಾರಿ ಚಾಲಕ ತನ್ನ ಲಾರಿ ಬಿಟ್ಟು ಸ್ಥಳದಿಂದ ಓಡಿ ಹೋಗಿ ಪರಾರಿಯಾಗಿದ್ದಾನೆ. ಸಿಪಿಐ ಸಂತೋಷ್ ಶೆಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 112 ತುರ್ತು ವಾಹನ ಹಾಗೂ ಪೊಲೀಸ್ ಸಿಬ್ಬಂದಿಗಳು ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸಿ ಇತರೆ ವಾಹನಗಳಿಗೆ ಹೆದ್ದಾರಿ  ಸಂಚಾರ ಸುಗಮಗೊಳಿಸಲು ಕರ್ತವ್ಯ ನಿರ್ವಹಿಸಿದರು.

ಸಾಮಾಜಿಕ ಕಾರ್ಯಕರ್ತರಾದ ವಿಜಯಕುಮಾರ್ ನಾಯ್ಕ,ಗೋಪು ಅಡ್ಲೂರ, ಮಂಜು ಅಡ್ಲೂರ, ಬೊಮ್ಮಯ್ಯ, ಮಂಜುನಾಥ,ರವಿ ಅಗಸೂರು,ಗೋಪಾಲ,ತುಳಸ ಗೌಡ,ಮಂಜು ಗೌಡ,ಅಜಿತ್ ನಾಯಕ ಹಾಗೂ ಪ್ರಕಾಶ್ ನಾಯಕ ಅಡ್ಲೂರ ಮತ್ತು ಅಗಸೂರು ಭಾಗದ ಕೆಲ ಸ್ಥಳೀಯರು ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version