ಬನವಾಸಿಯ ಮಹಾಸ್ಯಂದನ ರಥದ ಮರುನಿರ್ಮಾಣಕ್ಕೆ 3 ಕೋಟಿ ರೂಪಾಯಿ ವಿಶೇಷ ಅನುದಾನ

ರಥ  ಮರುನಿರ್ಮಾಣಕ್ಕೆ  ಮುಜರಾಯಿ ಇಲಾಖೆಯ ಮೂಲಕವಾಗಿ 3 ಕೋಟಿ ರೂಪಾಯಿ ವಿಶೇಷ ಅನುದಾನ

ಶಿರಸಿ: ಬನವಾಸಿಯ ಮಹಾಸ್ಯಂದನ ರಥದ ಮರುನಿರ್ಮಾಣಕ್ಕೆ 3 ಕೋಟಿ ರೂಪಾಯಿ ವಿಶೇಷ ಅನುದಾನ ಮಂಜೂರಾಗಿದೆ. ತಾಲೂಕಿನ ಅತೀ ದೊಡ್ಡ ರಥೋತ್ಸವ ಎಂದೇ ಖ್ಯಾತಿ ಪಡೆದಿರುವ ಬನವಾಸಿಯ ಮಧುಕೇಶ್ವರ ದೇವಸ್ಥಾನದ ರಥ ಶಿಥಿಲಾವಸ್ಥೆ ಗೊಂಡ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹೊಸ ರಥ ನಿರ್ಮಾಣ ಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಅಪ್ರಾಪ್ರೆಯನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಆರೋಪ: ದೂರು ದಾಖಲು

ಅವರ ಮನವಿಗೆ ಸ್ಪಂದಿಸಿದ ಸರ್ಕಾರ ರಥ  ಮರುನಿರ್ಮಾಣಕ್ಕೆ  ಮುಜರಾಯಿ ಇಲಾಖೆಯ ಮೂಲಕವಾಗಿ 3 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version