Important
Trending
ಸೇತುವೆಯಲ್ಲಿ ನೀರಿನ ಸೆಳತಕ್ಕೆ ಸಿಲುಕಿದ ಲಾರಿ: ಐವರ ರಕ್ಷಣೆ: ಲಾರಿಯಲ್ಲಿದ್ದ ಓರ್ವನಿಗಾಗಿ ಪತ್ತೆಕಾರ್ಯ
ನಿಯಂತ್ರಣ ತಪ್ಪಿ ನೀರಿನ ಸೆಳೆತಕ್ಕೆ ಸಿಲುಕಿ ಅವಾಂತರ
![](http://i0.wp.com/vismaya24x7.com/wp-content/uploads/2022/08/lorry.jpg?fit=1000%2C675&ssl=1)
ಅಂಕೋಲಾ: ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ಗಂಗಾವಳಿ ನದಿಗೆ ಅಡ್ಡಲಾಗಿ ಪಣಸಗುಳಿ ಕಚ್ಚಾ ಸೇತುವೆ ಇದ್ದು ನೀರಿನ ಹರಿವು ಕಡಿಮೆ ಇದ್ದಾಗ ಇಲ್ಲಿ ಓಡಾಟ ನಡೆಸಲಾಗುತ್ತಿದ್ದು, ಅಲ್ಲಿಂದ ಸಾಗುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ನೀರಿನ ಸೆಳೆತಕ್ಕೆ ಸಿಲುಕಿ ಅವಾಂತರ ಆಗಿದೆ ಎನ್ನಲಾಗಿದೆ. ಈ ಅವಘಡ ಸಂಭವಿಸುವ ವೇಳೆ ಲಾರಿಯಲ್ಲಿ 6 ಜನರಿದ್ದರು ಎನ್ನಲಾಗಿದೆ.
![](http://i0.wp.com/vismaya24x7.com/wp-content/uploads/2022/08/Screenshot_2022-08-24-21-09-50-52_965bbf4d18d205f782c6b8409c5773a43.jpg?resize=708%2C369&ssl=1)
ಗುಳ್ಳಾಪುರದಿಂದ ಬೋಟ್ ತಂದು 5 ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನೋರ್ವ ಲಾರಿಯ ಒಳಗೆ ಸಿಲುಕಿಕೊಂಡಿದ್ದಾನೆ ಎನ್ನಲಾಗಿದ್ದು ಆತನ ಪತ್ತೆ ಕಾರ್ಯ ಕಷ್ಟ ಸಾಧ್ಯವಾಗಿದೆ. ಘಟನೆ ಕುರಿತಂತೆ ನಿಖರ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಸುದ್ದಿ ತಿಳಿದ ಅಂಕೋಲಾ ತಹಶೀಲ್ದಾರ್,ಹಾಗೂ ಯಲ್ಲಾಪುರ ತಾಲೂಕುಗಳ ಸಂಬಂಧಿತ ಕಂದಾಯ , ಪೋಲೀಸ್, ಮತ್ತಿತರ ಇಲಾಖೆಗಳ ಅಧಿಕಾರಿಯಾಗಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮಾಹಿತಿ ಕೇಳಿಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
![](http://i0.wp.com/vismaya24x7.com/wp-content/uploads/2022/08/shri-devi-latest.jpg?resize=708%2C398&ssl=1)