Important
Trending

Sandalwood: ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ಶ್ರೀಗಂಧದ ಕಟ್ಟಿಗೆ ವಶಕ್ಕೆ

ಆರೋಪಿ ಬಂಧನ

ಯಲ್ಲಾಪುರ: ಖಚಿತ ಮಾಹಿತಿ ಮೇರೆಗೆ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 52 ಕೆಜಿ ತೂಕದ ಅಂದಾಜು 2 ಲಕ್ಷ ರೂ ಮೌಲ್ಯದ ಶ್ರೀಗಂಧದ ( Sandalwood) ಕಟ್ಟಿಗೆಯನ್ನು ಮಂಚಿಕೇರಿ ಅರಣ್ಯ ವಲಯದ ಸಿಬ್ಬಂದಿಗಳು ಜಪ್ತಿಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಮಂಚಿಕೇರಿಯ ಜನತಾ ಕಾಲೋನಿಯಲ್ಲಿ ಗಣೇಶ ಸೋಮು ಲಮಾಣಿ ಎಂದು ತಿಳಿದುಬಂದಿದೆ. ಈತ ಮನೆಯಲ್ಲೇ 52 ಕೆಜಿ ಶ್ರೀಗಂಧದ ( Sandalwood) ಕಟ್ಟಿಗೆಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ.

ಮನೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಸ್.ಜಿ.ಹೆಗಡೆರವರ ಮಾರ್ಗದರ್ಶನದಲ್ಲಿ ಮಂಚಿಕೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂಕ್ಷಣಾಧಿಕಾರಿಗಳಾದ ಹಿಮವತಿ ಭಟ್ ನಿರ್ದೇಶನದಲ್ಲಿ ಮಂಚಿಕೇರಿ ವಲಯದ ವಲಯ ಅರಣ್ಯಾಧಿಕಾರಿಗಳಾದ ಅಮಿತಕುಮಾರ ಚವ್ಹಾಣ ನೇತೃತ್ವದ ಕಾರ್ಯಾಚರಣೆಯ ನಡೆಯಿತು. ಕಾರ್ಯಾಚರಣೆಯ ತಂಡದಲ್ಲಿ ಮಂಚಿಕೇರಿ ಶಾಖೆಯ ಉಪವಲಯ ಅರಣ್ಯಾಧಿಕಾರಿಗಳಾದ ಪವನಕುಮಾರ ಲೋಕುರ, ಉಪವಲಯ ಅರಣ್ಯಾಧಿಕಾರಿಗಳಾದ ಸಂತೋಷ ಪವಾರ, ಸಂಗಮೇಶ ಅಂಗಡಿ, ಜಗದೀಶ ಪಾಲಕನವರ, ವಿರಾಜ್ ನಾಯಕ, ಕಲ್ಲಪ್ಪ, ಬರದೂರ, ಮಂಜುನಾಥ ಆಗೇರ, ಗಸ್ತು ವನಪಾಲಕ ವಿಷ್ಣು ಪೂಜಾರಿ ಮತ್ತು ವಾಹನ ಚಾಲಕರಾದ ಗಂಗಾಧರ ರೆಡ್ಡಿ, ಮಂಜು ನಾಯ್ಕ ಮತ್ತು ಅರಣ್ಯ ವೀಕ್ಷಕರುಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button