ಗಣೇಶೋತ್ಸವದ ಅಂಗವಾಗಿ ಯಕ್ಷಗಾನ: ಗಮನಸೆಳೆದ ಯಕ್ಷಗಾನ ನೃತ್ಯರೂಪಕ

ಸಿದ್ದಾಪುರ: ಹುಲಿಸಿದ್ದೇಶ್ವರ ಯಕ್ಷನೈದಿಲೆ ಕಲಾಬಳಗ ಪುರದಮಠ ಹಾಗೂ ಯಕ್ಷತರಂಗಿಣಿ  ಹಾರ್ಸಿಕಟ್ಟಾ ಇವರಿಂದ ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ  ಸಮಿತಿಯಲ್ಲಿ ಗಣೇಶೋತ್ಸವದ ಅಂಗವಾಗಿ  ಶ್ರೀಕೃಷ್ಣ ಯಕ್ಷನೃತ್ಯ, ಪುಣ್ಯಕೋಟಿ  ಯಕ್ಷಗಾನ ನೃತ್ಯರೂಪಕ ಹಾಗೂ ಜಾಂಬವತಿ ಪರಿಣಯ ಯಕ್ಷಗಾನ ನಡೆಯಿತು.

ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ವಿದ್ಯಾ ಪ್ರಕಾಶ ನಾಯ್ಕ ಉದ್ಘಾಟಿಸಿದರು. ಯಕ್ಷಗಾನ ಕಲಾವಿದ  ಪಿ.ವಿ.ಹೆಗಡೆ ಹೊಸಗದ್ದೆ ಅಧ್ಯಕ್ಷತೆವಹಿಸಿದ್ದರು.  ಗ್ರಾಪಂ ಸದಸ್ಯರಾದ ಅನಂತ ಹೆಗಡೆ ಹೊಸಗದ್ದೆ, ವರ್ತಕ ಅನಂತ ಶಾನಭಾಗ,  ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ,  ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ  ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ  ಚಳ್ಳೆಹದ್ದ, ಗಂಗಾಧರ ನಾಯ್ಕ ಹೊಸಗದ್ದೆ, ನಾರಾಯಣ ದೇವಾಡಿಗ,ಧನಂಜಯ ನಾಯ್ಕ ಪುರದಮಠ, ಗಣಪತಿ ಕೆ.ನಾಯ್ಕ ಇತರರಿದ್ದರು.

ಸಾವಿಗೆ ಮುನ್ನ ವಿಡಿಯೋ ಮಾಡಿ ಬಿಡುಗಡೆ: ಮರಕ್ಕೆ ನೇಣು ಬಿಗಿದು ಕೊಂಡು ಮೃತಪಟ್ಟ ಯುವಕ ? ವಿಡಿಯೋದಲ್ಲಿ ಏನಿದೆ ನೋಡಿ?

ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ  ವೆಂಕಟಗಿರಿ ಹೆಗಡೆ ಹಾರ್ಸಿಮನೆ, ನಂದನ ಬಿ.ನಾಯ್ಕ ಅರಶೀನಗೋಡ, ಪತ್ರಕರ್ತ ದಿವಾಕರ ನಾಯ್ಕ ಸಂಪಖoಡ, ಯೋಧರಾದ ಅಕ್ಷಯ ನಾಯ್ಕ  ಬೇಡ್ಕಣಿ ಹಾಗೂ ವಿನಾಯಕ ನಾಯ್ಕ ಬೇಡ್ಕಣಿ  ಅವರನ್ನು ಸಂಘಟಕರು ಸನ್ಮಾನಿಸಿ ಗೌರವಿಸಿದರು. ಶಿಕ್ಷಕ ವೆಂಕಟೇಶ ಮಡಿವಾಳ ಹಾಗೂ ಪ್ರವೀಣ  ಡಿ.ನಾಯ್ಕ ನಿರ್ವಹಿಸಿದರು.

ನಂತರ ಯಕ್ಷತರಂಗಿಣಿ ಹಾರ್ಸಿಕಟ್ಟಾ ಇವರಿಂದ  ನಂದನ ನಾಯ್ಕ ಅರಶಿನಗೋಡ ಅವರ  ನಿರ್ದೇಶನದಲ್ಲಿ ಶ್ರೀಕೃಷ್ಣ ಯಕ್ಷನೃತ್ಯ, ಪುಣ್ಯಕೋಟಿ ಯಕ್ಷಗಾನ ನೃತ್ಯರೂಪಕ  ಪ್ರದರ್ಶನಗೊಂಡಿತು. ಹುಲಿಸಿದ್ದೇಶ್ವರ ಯಕ್ಷನೈದಿಲೆ ಕಲಾಬಳಗ ಪುರದಮಠ ಇವರಿಂದ ಪ್ರದರ್ಶನಗೊಂಡ  ಜಾಂಬವತಿ ಪರಿಣಯ ಯಕ್ಷಗಾನದ ಹಿಮ್ಮೇಳದಲ್ಲಿ  ರಾಮಚಂದ್ರ ನಾಯ್ಕ ಹೆಮ್ಮನಬೈಲ್,ನಾರಾಯಣ ಗುಡ್ಡೆಕಣ, ಧನಂಜಯ ಪುರದಮಠ  ಸಹಕರಿಸಿದರು. ಮುಮ್ಮೇಳದಲ್ಲಿ ವೆಂಕಟಗಿರಿ  ಹಾರ್ಸಿಮನೆ, ಮಂಜುನಾಥ ಶೆಟ್ಟಿ ಕಾಳೇನಳ್ಳಿ, ಬಾಬಣ್ಣ  ಕಾಳೇನಳ್ಳಿ, ನಂದನ್ ನಾಯ್ಕ ಅರಶೀನಗೋಡ ಪಾತ್ರನಿರ್ವಹಿಸಿದರು.

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version