Important
Trending

ತೋಟದ ಮನೆಯಲ್ಲಿಟ್ಟಿದ್ದ ಅಡಿಕೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಶಿರಸಿ: ತೋಟದ ಮನೆಯಲ್ಲಿಟ್ಟಿದ್ದ ಅಡಿಕೆಯನ್ನು ಕಳ್ಳತನ ಮಾಡಿದ ಘಟನೆ ಬನವಾಸಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೇಖರ್ ಗೌಡ (42) ಮತ್ತು ರಾಘವೇಂದ್ರ ಶಿರಟ್ಟಿ (30) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.

ಅಬ್ಬಾ! ಬೃಹತ್ ಕಾಳಿಂಗ ಸರ್ಪ: ಉರಗತಜ್ಞನ ರೋಚಕ ರಕ್ಷಣಾ ಕಾರ್ಯಾಚರಣೆ

ಆಗಸ್ಟ್ 30 ನೇ ತಾರೀಖು ಅಬ್ದುಲ್ ಮಮ್ಮದ ಸಾಬ್ ತೋಟದ ಮನೆಯಲ್ಲಿಟ್ಟದ್ದ ಸುಮಾರು 1 ಲಕ್ಷ ಮೌಲ್ಯದ ನಾಲ್ಕು ಕ್ವಿಂಟಲ್ ಅಡಿಕೆಯನ್ನು ಈ ಇಬ್ಬರು ಆರೋಪಿಗಳು ಕಳ್ಳತನವನ್ನು ಮಾಡಿದ್ದರು. ಬನವಾಸಿ ಪೊಲೀಸ್ ಠಾಣೆಯಲ್ಲಿ ಮನೆ ಮಾಲೀಕ ಪ್ರಕರಣ ದಾಖಲಿಸಿದ್ದು, ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button