Important
Trending

ಪರೇಶ್ ಮೇಸ್ತ ಪ್ರಕರಣ: ಸಿಬಿಐ ಮರುತನಿಖೆಗೆ ಸಂಬoಧಿಸಿದoತೆ ನಿರ್ಧಾರ ತೆಗೆದುಕೊಳ್ಳಲು ಸರ್ಕಾರಿಂದ ಪರಿಶೀಲನೆ

ಮಂಗಳೂರು: ಪರೇಶ್ ಮೇಸ್ತ ಅವರ ತಂದೆಯ ಮನವಿಯ ಮೇರೆಗೆ ಹಿಂದೂ ಸಂಘಟನೆ ಕಾರ್ಯಕರ್ತ ಪರೇಶ್ ಮೇಸ್ತಾ ಕುರಿತ ಸಿಬಿಐ ಮುಕ್ತಾಯ ವರದಿಯನ್ನು ಮರುತನಿಖೆಗಾಗಿ ಪರಿಶೀಲಿಸಲಾಗುವುದು. ಮರು ತನಿಖೆಗೆ ಸಂಬoಧಿಸಿದoತೆ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಸಚಿವ ಜ್ಞಾನೇಂದ್ರ ಹೇಳಿದರು. ಪರೇಶ್ ಮೇಸ್ತಾ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಬಿ-ರಿಪೋರ್ಟ್ ಸಲ್ಲಿಸಿದೆ. ಪರೇಶ್ ಮೇಸ್ತಾ ಅವರ ಅನುಮಾನಾಸ್ಪದ ಸಾವನ್ನು ಪರಿಶೀಲಿಸುವುದು ಮತ್ತು ನಿಖರವಾದ ಕಾರಣವನ್ನು ಕಂಡುಹಿಡಿಯುವುದು ಅಗತ್ಯವಾಗಿದೆ . ಇದು ಕೊಲೆ ಪ್ರಕರಣ ಎಂದು ಮೇಸ್ತಾ ಅವರ ತಂದೆ ಮತ್ತು ಸ್ಥಳೀಯರು ಹೇಳುತ್ತಾರೆ ಎಂದು ಅವರು ತಿಳಿಸಿದರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button