ಎರಡು ಎಕರೆಗೂ ಹೆಚ್ಚು ವಿಸ್ತಾರವಿರುವ ಗುಜರಿ ಅಂಗಡಿಯಲ್ಲಿ ಅಗ್ನಿ ಅನಾಹುತ: ಸುತ್ತಮುತ್ತಲ ಪ್ರದೇಶದಲ್ಲಿ ಆತಂಕ

ಕುಮಟಾ: ಪಟ್ಟಣದ ಗುಜರಿ ಅಂಗಡಿಯೊoದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿರುವ ಘಟನೆ ವರದಿಯಾಗಿದೆ. ಕುಮಟಾ, ಹೊನ್ನಾವರ, ಅಂಕೊಲಾ, ಭಟ್ಕಳ, ಕಾರವಾರ ಅಗ್ನಿಶಾಮಕದಳದವರು ಸತತವಾಗಿ 6 ತಾಸುಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದರೂ ಬೆಂಕಿಯ ಕೆನ್ನಾಗೆ ಕಡಿಮೆಯಾಗಿರಲಿಲ್ಲ.

ಬೆಂಕಿ ಅನಾಹುತದಿಂದ ಸುತ್ತಮುತ್ತಲ ಸ್ಥಳೀಯ ಮನೆಯವರು ಆತಂಕವನ್ನು ಉಂಟು ಮಾಡಿದ್ದು, ಕೆಲ ಮನೆಗಳೆಲ್ಲಾ ಖಾಲಿ ಮಾಡಲಾಗಿದೆ. ಸುಮಾರು ಎರಡುವರೆ ಎಕರೆ ಜಮೀನಿನಲ್ಲಿ ಕಚ್ಚಾವಸ್ತು ಇದ್ದು ಬೆಂಕಿಯ ಕೆನ್ನಾಲಿಗೆಗೆ ವಸ್ತುಗಳು ಆಹುತಿಯಾಗುವ ಜೊತೆಗೆ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಇಲ್ಲಿ ಹತ್ತಿರದಲ್ಲಿ ಗ್ಯಾಸ್ ಬಂಕರ್ ಹಾಗೂ ಪೆಟ್ರೋಲ್ ಬಂಕ್ ಇರುವುದು ಇನ್ನೂ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.ಅಳ್ವೇಕೊಡಿಯ ಬಾಷಾ ಶೇಕ್ ಎನ್ನುವರಿಗೆ ಸೇರಿದ ಗುಜರಿ ಅಂಗಡಿ ಇದಾಗಿದ್ದು, ದುರ್ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗುಜರಿ ಗೊಡೌನಿನಲ್ಲಿ ಭಾರಿ ಪ್ರಮಾಣದಲ್ಲಿ ಕಚ್ಚಾವಸ್ತುಗಳು ಸಂಗ್ರಹ ಇದ್ದು, ಇದು ಬೆಂಕಿಯ ಕೆನ್ನಾಲಿಗೆಯನ್ನು ಮತ್ತಷ್ಟು ಹೆಚ್ಚಿಸಿದೆ.

ವಿಸ್ಮಯ ನ್ಯೂಸ್, ಕುಮಟಾ

Exit mobile version