ಬೈಕ್ ಕಳ್ಳತನ ಆರೋಪಿಯನ್ನು ಬಂಧಿಸಿದ ಪೊಲೀಸರು

ಶಿರಸಿ: ಬೈಕ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬನವಾಸಿ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಡಗೋಡ  ಗೋಟಗೊಡಿಕೊಪ್ಪದ ಲಕ್ಷ್ಮಣ ಫಕೀರಪ್ಪ ಹರಿಜನ ಬಂಧಿತ ಆರೋಪಿಯಾಗಿದ್ದಾನೆ. ಇತನು 2022ರ ಮಾರ್ಚ್ ನಲ್ಲಿ ತಾಲೂಕಿನ ಬೆಂಗಳೆ ಓಣಿಕೇರಿಯ ಮಾದೇವ ದಾನ್ಯಾ ಚಲವಾದಿ ಎಂಬುವರಿಗೆ ಸೇರಿದ ಬೈಕ್ ನನ್ನು ಕದ್ದು ಪರಾರಿಯಾಗಿದ್ದ.ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೈಕ್ ಕಳ್ಳನಾಗಿ ಬಲೆಬೀಸಿದ್ದ ಬನವಾಸಿ ಠಾಣೆ ಪೊಲೀಸರು ಅಂತೂ ಆರೋಪಿಯಜೊತೆ ಕಳ್ಳತನ ವಾದ ಬೈಕ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬನವಾಸಿ ಠಾಣೆ ಪಿಎಸ್ಐ ಹನುಮಂತ ಬಿರಾದಾರ, ಚಂದ್ರಕಲಾ ಪತ್ತಾರ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Exit mobile version