ಅಡುಗೆ ಕೋಣೆಯಲ್ಲಿ ನೇಣಿಗೆ ಶರಣಾದ ದುರ್ದೈವಿ: ಹುಲಿ ಗಣಪತಿ ಎಂದೇ ಪರಿಚಿತನಾಗಿದ್ದವ ಇನ್ನಿಲ್ಲ

ಅಂಕೋಲಾ: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುರಸಭೆ ವ್ಯಾಪ್ತಿಯ ಕೋಟೆವಾಡದಲ್ಲಿ ಸಂಭವಿಸಿದೆ. ಕೋಟೆವಾಡದ ವಿ.ಟಿ.ರಸ್ತೆ ನಿವಾಸಿ ಗಣಪತಿ ನೂನಾ ನಾಯ್ಕ (75) ಮೃತ ದುರ್ದೈವಿಯಾಗಿದ್ದಾನೆ.  ತನ್ನ ಆತ್ಮೀಯ ವಲಯದಲ್ಲಿ ಹುಲಿ ಗಣಪತಿ ಎಂದೇ ಪರಿಚಿತನಾಗಿದ್ದ ಈತನಿಗೆ  ಕಳೆದ ಆರು ತಿಂಗಳ ಹಿಂದಷ್ಟೇ ಪತ್ನಿ ವಿಯೋಗದಿಂದಾಗಿ ಮತ್ತು ತನ್ನ ಮುದಿ ವಯಸ್ಸಿನಲ್ಲಿ ಕಾಡುತ್ತಿರುವ ನಾನಾ  ಖಾಯಿಲೆಯಿಂದ ಇಲ್ಲವೇ ಬೇರೆ ಯಾವುದೋ ಕಾರಣದಿಂದ ಮಾನಸಿಕವಾಗಿ ನೊಂದು, ಈತ  ಜೂನ್ 20 ರ ಮಂಗಳವಾರ ಮಧ್ಯಾಹ್ನ 3.30 ರಿಂದ ಸಂಜೆ 5.45 ರ ಅವಧಿಯಲ್ಲಿ 

ಮನೆಯ ಅಡುಗೆ ಕೋಣೆಯಲ್ಲಿ ಮೇಲ್ಛಾವಣಿಯ ಪೈಪಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡಿರುವುದಾಗಿ ತಿಳಿದು ಬಂದಿದೆ. ಪಿ ಎಸೈ ಉದ್ದಪ್ಪ ಎ.ಡಿ ಮತ್ತು ಪೊಲೀಸ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ತಾಲೂಕಾಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ಮತ್ತು ಸ್ಥಳೀಯರು , ಮೃತನ ಮಗ ರಮೇಶ ಹಾಗೂ ಗೆಳೆಯರು ಸಹಕರಿಸಿದರು. ಆತ್ಮಹತ್ಯೆ ಘಟನೆ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version