ಅಕ್ರಮವಾಗಿ ಜಾನುವಾರು ಸಾಗಾಟ: ಮೂವರ ಬಂಧನ

ಸಿದ್ದಾಪುರ:ಲಗೇಜ್ ವಾಹನದಲ್ಲಿ ಹೋರಿಗಳನ್ನು ವಧೆ ಮಾಡುವ ಉದ್ದೇಶ ದಿಂದ ಹಿಂಸಾತ್ಮಕವಾಗಿ ತುಂಬಿಕೊAಡು ಹೋಗುತ್ತಿರುವಾಗ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿದ ಘಟನೆ ಸಿದ್ದಾಪುರದ ಮಾವಿನಗುಂಡಿಯಲ್ಲಿ ನಡೆದಿದೆ. ಶಿರಾಳಕೊಪ್ಪದಿಂದ ಭಟ್ಕಳಕ್ಕೆ ಹೋರಿಗಳನ್ನು ವಧೆ ಮಾಡಲು ಮಾರಾಟ ಮಾಡುವ ಉದ್ದೇಶದಿಂದ ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ಕಟ್ಟಿಕೊಂಡು ಬುಧವಾರ ಬೆಳಿಗಿನ ಜಾವಾ 4 ಗಂಟೆ ಸುಮಾರಿಗೆ ಸಾಗಾಟ ಮಾಡುತ್ತಿದ್ದವಾಗ ಸಿದ್ದಾಪುರ ಪೊಲೀಸರು ದಾಳಿ ನಡೆಸಿದ್ದಾರೆ. ಶಿಕಾರಿಪುರ ತಾಲೂಕಿನ ತಾಳಗುಂದದ ಮಾರುತಿ ರಾಮಪ್ಪ , ಜಿಯಾವುಲ್ಲಾ ಬಾಷಾಸಾಬ್ ಹಳ್ಳೂರಕೇರಿ, ಪೃಥ್ವಿರಾಜ ಸಹದೇವಪ್ಪ ಎನ್ನುವವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Exit mobile version