ರಸ್ತೆಯಲ್ಲಿ ಹೋಗುತ್ತಿರುವವರನ್ನು ಅಡ್ಡಗಟ್ಟಿ ದರೋಡೆ: ಸಾರ್ವಜನಿಕರು ಹಿಡಿದು ಮಾಡಿದ್ದೇನು ನೋಡಿ?

ಸಿದ್ದಾಪುರ: ರಸ್ತೆಯಲ್ಲಿ ಹೋಗುತ್ತಿರುವವರನ್ನು ಅಡ್ಡಗಟ್ಟಿ ದರೋಡೆ ನಡೆಸುತ್ತಿದ್ದ ಇಬ್ಬರು ದರೋಡೆಕೋರನ್ನ ಸಾರ್ವಜನಿಕರು ಥ-ಳಿಸಿ ಪೊಲೀಸರ ವಶಕ್ಕೆ ನೀಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಿಲ್ಕುಂದ ಸಮೀಪದ ಕಂಚಿಕೈ ಬಳಿ ನಡೆದಿದೆ. ಶಿರಸಿಯಲ್ಲಿ ಇವರಿಬ್ಬರು ಬೈಕ್ ಕಳ್ಳತನ ಮಾಡಿ ಕುಮಟಾ ಶಿರಸಿ ರಸ್ತೆಯ ದೇವಿಮನೆ ಘಾಟ್ ನಲ್ಲಿ ಕೋಳಿ ತುಂಬಿಕೊoಡು ಬರುತ್ತಿದ್ದ ಬೊಲೆರೋ ವಾಹನ ತಡೆದು ಚಾಕು ತೋರಿಸಿ ಹಣ ವಸೂಲಿ ಮಾಡಿದ್ದರು.

ಇದನ್ನೂ ಓದಿ :ಬೃಹತ್ ಉದ್ಯೋಗಮೇಳ: 600ಕ್ಕೂ ಹೆಚ್ಚು ಉದ್ಯೋಗಾವಕಾಶ: ಇಲ್ಲಿ ಕ್ಲಿಕ್ ಮಾಡಿ ಹೆಸರು ನೋಂದಾಯಿಸಿಕೊಳ್ಳಿ

ಅಷ್ಟೆ ಅಲ್ಲ, ಕಂಚಿಕೈ ಬಳಿ ಉಂಚಳ್ಳಿ ಜಲಪಾತ , ಭೀಮನ ಗುಡ್ಡ ವೀಕ್ಷಿಸಿ ವಾಪಾಸ್ ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಮೂತ್ರವಿಸರ್ಜನೆಗೆ ಬೈಕ್ ನಿಲ್ಲಿಸಿದ್ದ ವೇಳೆ ಹಣವಸೂಲಿಗೆ ಯತ್ನಿಸಿದ್ದಾರೆ. ಈ ವೇಳೆ ವಿಷಯ ತಿಳಿದ ಸಾರ್ವಜನಿಕರು ದರೋಡೆಕೋರರಿಗೆ ಸರಿಯಾಗಿ ಧರ್ಮ-ದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಿರಸಿ ತಾಲೂಕಿನ ಬನವಾಸಿ ರಸ್ತೆಯ ಶಹಿದ್ ಮತ್ತು ಶಿವಮೊಗ್ಗ ಟಿಪ್ಪು ನಗರದ ಇರ್ಫಾನ್ ಪೊಲೀಸ್ ವಶದಲ್ಲಿರುವ ದರೋಡೆಕೋರರು. ಘಟನೆಗೆ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Exit mobile version