ಜಿಲ್ಲಾಡಳಿತದ ವಿರುದ್ಧ ಆಕ್ರೋಶ: ಮಾದ್ಯಮಮಿತ್ರರ ಪ್ರತಿಭಟನೆ

ಎಲ್ಲಾ ಪತ್ರಿಕಾಗೋಷ್ಠಿ ಬಹಿಷ್ಕರಿಸುವ ಎಚ್ಚರಿಕೆ

ಅಂಕೋಲಾ: ಉದ್ದೇಶಪೂರ್ವಕವಾಗಿ ಪತ್ರಕರ್ತರು ಮತ್ತು ಮಾಧ್ಯಮದವರನ್ನು ನಿಷೇಧಿಸುವ ಆಡಳಿತ ವರ್ಗ,ಮಾಧ್ಯಮದವರು ಕಾರ್ಯನಿರ್ವಹಿಸಲು ಒಳ ಬಿಡದೆ,ರಾಜಕಾರಣಿಗಳು ಮತ್ತು ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆತ್ಮೀಯರಾಗಿರುವವರನ್ನು ಒಳ ಬಿಟ್ಟು ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ ಮತ್ತು ಕೆಲ ಯೂಟ್ಯೂಬ್ ಚಾನೆಲ್ ಅವರಿಗೆ ಮಾತ್ರ ಅವಕಾಶ ಏಕೆ ಕಲ್ಪಿಸಿದ್ದಾರೆ ಎಂದು ,ಕೆಲ ಪತ್ರಕರ್ತರು ಮತ್ತು ಮಾಧ್ಯಮ ಮಿತ್ರರು , ಬೆಳಸೆ ಬಳಿ ಹೆದ್ದಾರಿಯಲ್ಲಿ ಕುಳಿತು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದೊಮ್ಮೆ ತಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳದಿದ್ದರೆ,ಸಂಬಂಧಿತ ಎಲ್ಲಾ ಪತ್ರಿಕಾಗೋಷ್ಠಿಗಳನ್ನು ಬಹಿಷ್ಕರಿಸುವುದಾಗಿ ಸುದ್ದಿ ಮಾಧ್ಯಮದವರು ತಿಳಿಸಿದ್ದು,ಜಿಲ್ಲಾಡಳಿತ ಯಾವ ರೀತಿ ಸ್ಪಂದಿಸುತ್ತದೆ ಕಾದುನೋಡಬೇಕಿದೆ.

ವಿಸ್ಮಯ ನ್ಯೂಸ್ ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version