Shreekumar Travels: ಮಂಗಳೂರಿನಿಂದ ಮಂತ್ರಾಲಯಕ್ಕೆ ಪ್ರತಿದಿನ ಸುಸಜ್ಜಿತ ಸ್ಲೀಪರ್ ಬಸ್ ಸೌಲಭ್ಯ

ಕಾರವಾರ: ಶ್ರೀಕುಮಾರ ರೋಡ್‌ಲೈನ್ಸ್ ( Shreekumar Travels) ಸಮೂಹ ಸಂಸ್ಥಯು ಅತ್ಯುತ್ತಮ ಸೇವೆ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದೆ. ಇದೀಗ ಶ್ರೀಕುಮಾರ್ ಟ್ರಾವೆಲ್ಸ್ ನಿಂದ ಮಂಗಳೂರಿನಿಂದ ಮಂತ್ರಾಲಯಕ್ಕೆ ಪ್ರತಿದಿನ ಅತ್ಯಂತ ಸುಸಜ್ಜಿತ ಸ್ಲೀಪರ್ ಬಸ್ ಸೌಲಭ್ಯ ನೀಡಲಾಗುತ್ತಿದ್ದು, ಆಗಸ್ಟ್ ೭ ರಿಂದ ಶುಭಾರಂಭಗೊಳ್ಳಲಿದೆ. ಈ ಅತ್ಯಾಧುನಿಕ ಸೌಲಭ್ಯದ ಬಸ್, ಪ್ರತಿದಿನ ಮಂಗಳೂರಿನಿAದ ಹೊನ್ನಾವರ, ಹುಬ್ಬಳ್ಳಿ ಮಾರ್ಗವಾಗಿ ಮಂತ್ರಾಲಯಕ್ಕೆ ತೆರಳಲಿದೆ. ಹೀಗಾಗಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ ದರ್ಶನ, ಭಕ್ತರಿಗೆ ಇನ್ನಷ್ಟು ಸುಲಭವಾಗಿದೆ.

ಈ ಸಂದರ್ಭದಲ್ಲಿ ಶ್ರೀಕುಮಾರ್ ಟ್ರಾವೆಲ್ಸ್ ನ ( Shreekumar Travels) ಮಾಲೀಕರಾದ ವೆಂಕಟರಮಣ ಹೆಗಡೆಯವರು ವಿಸ್ಮಯ ಟಿ.ವಿಯೊಂದಿಗೆ ಮಾತನಾಡಿ, ಬೆಂಗಳೂರು, ಮೈಸೂರು, ಹೀಗೆ ಬೇರೆ ಬೇರೆ ಮಾರ್ಗಗಳಲ್ಲಿ ನಮ್ಮ ಬಸ್ ಗಳು ದಿನನಿತ್ಯ ಓಡಾಡುತ್ತಿದ್ದು , ಈಗ ಮಂತ್ರಾಲಯ ತೆರಳುವ ಭಕ್ತರಿಗಾಗಿ ಹೈಟೆಕ್ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದೇವೆ ಎಂದರು ಮಾಹಿತಿ ನೀಡಿದರು. ಉದ್ಯಮಿಗಳಾದ ಎಮ್ ಆರ್.ಹೆಗಡೆ ಮಾತನಾಡಿ, ಪ್ರತಿದಿನ ಮಂಗಳೂರಿನಿಂದ ಹೊನ್ನಾವರ, ಹುಬ್ಬಳ್ಳಿ ಮಾರ್ಗವಾಗಿ ಮಂತ್ರಾಲಯಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಗ್ರಾಹಕರು ಸಹಕರಿಸುವಂತೆ ಕೋರಿದರು.

ರಾಘವೇಂದ್ರ ಸ್ವಾಮೀಜಿಗಳವರ ದರ್ಶನಕ್ಕೆ ಪ್ರಯಾಸಪಟ್ಟು ಪ್ರಯಾಣಿಸುವುದಕ್ಕಿಂತ ಆರಾಮದಾಯಕಾಗಿ, ಸುಸಜ್ಜಿತ ಬಸ್‌ನಲ್ಲಿ ತೆರಳುವ ಪ್ರಯಾಣದ ವ್ಯವಸ್ಥೆಯನ್ನು ಮಾಡಿರುವುದು ನಿಜಕ್ಕೂ ಖುಷಿಯ ವಿಚಾರ.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Exit mobile version