ತನ್ನ ಮೊಬೈಲ್ ಸ್ವಿಚ್ ಆಫ್ ಇದೆ ಎಂದು ಹೇಳಿ ಬೇರೆಯವರ ಮೊಬೈಲಿಂದ ಕರೆ ಮಾಡಿದ ಯುವಕ ನಾಪತ್ತೆ

ಮಗ ವಿಕ್ರಾಂತನ ಬರುವಿಕೆಗೆ ಕಾದು ಚಿಂತಾಕ್ರಾಂತಳಾಗಿದ್ದ ನೊಂದ ತಾಯಿ ನೀಡಿದ ದೂರಿನಲ್ಲಿ ಏನಿದೆ?

ಅಂಕೋಲಾ: ಮೀನುಗಾರಿಕೆ ವೃತ್ತಿಯ ಯುವಕನೋರ್ವ ,ಮನೆಯಿಂದ ಹೊರಹೋದವ ಮರಳಿ ಮನೆಗೆ ಬಾರದೇ ಕಾಣೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗೇರಿ ಹರಿಕಂತ್ರವಾಡದ ನಿವಾಸಿ ವಿಶ್ರಾಂತ ನೇಮು ಹರಿಕಂತ್ರ(25) ಕಾಣೆಯಾಗಿರುವ ಯುವಕನಾಗಿದ್ದಾನೆ. ಈ ಕುರಿತು ತನ್ನ ಮಗನನ್ನು ಹುಡುಕಿ ಕೊಡುವಂತೆ ನೋಂದ ತಾಯಿ ಗೀತಾ ಹರಿಕಂತ್ರ ಎನ್ನುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಡರಾತ್ರಿ ಮನೆಗೆ ಆಗಮಿಸಿದ ನಾಗರಹಾವು : ಬುಸ್ ಗುಡುವ ಶಬ್ಬ ಕೇಳಿ ಮನೆಯವರು ಎಚ್ಚರ

ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ವಿಶ್ರಾಂತ ಹರಿಕಂತ್ರ ಸೆಪ್ಟೆಂಬರ್ 29 ರಂದು ಬಡಗೇರಿಯ ತನ್ನ ಮನೆಗೆ ಆಗಮಿಸಿದ್ದ. ನಂತರ ಅಕ್ಟೋಬರ್ 1 ರಂದು ಕಾರವಾರದ ಬೈತಕೋಲ್ ಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ತೆರಳಿದ್ದ ಎನ್ನಲಾಗಿದ್ದು , ನಂತರ ತನ್ನ ತಾಯಿಗೆ ಕರೆ ಮಾಡಿ ತಾನು ಸ್ನೇಹಿತರೊಂದಿಗೆ ಛತ್ತೀಸಗಡದ ರಾಯಗಡಕ್ಕೆ ಹೋಗುವುದಾಗಿ ತಿಳಿಸಿ , ಅಕ್ಟೋಬರ್ 4 ರಂದು ಬೇರೆಯವರ ಮೊಬೈಲ್ ಪೋನಿನಿಂದ ತಾಯಿಗೆ ಕರೆ ಮಾಡಿ ತನ್ನ ಮೊಬೈಲ್ ಸ್ವಿಚ್ ಆಫ್ ಆಗಿರುವುದಾಗಿ ತಿಳಿಸಿದ್ದ.

ಮತ್ತೆ ಮಗನ ಕರೆ ಬರದಿರುವ ಕಾರಣ ಅಕ್ಟೋಬರ್ 7 ರಂದು ತಾಯಿ ವಿಕ್ರಾಂತ ಮತ್ತು ಆತನ ಸ್ನೇಹಿತನ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಿರಲಿಲ್ಲ ಎನ್ನಲಾಗಿದ್ದು ಮಗ ಇಂದು ಬರಬಹುದು ,ನಾಳೆ ಬರಬಹುದು ಎಂದು ಸ್ವಲ್ಪ ದಿನ ಕಾದು ನೊಂದಿದ್ದ ತಾಯಿ ಮಗನ ಕುರಿತು ಯಾವುದೇ ಮಾಹಿತಿ ಲಭ್ಯವಾಗದ ಕಾರಣ ಪೊಲೀಸ್ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದು ಕಾಣೆಯಾಗಿರುವ ವಿಕ್ರಾಂತ ಕುರಿತು ಮಾಹಿತಿ ಲಭ್ಯವಾದರೆ ಅಂಕೋಲಾ ಪೊಲೀಸ್ ಠಾಣೆಗೆ ನೇರವಾಗಿ ಇಲ್ಲವೇ ಈ ಕೆಳಗಿನ ದೂರವಾಣಿ ಮತ್ತು ಮೊಬೈಲ್ ಸಂಖ್ಯೆಗೆ ( 08388-230333, 9480805250,9480805268) ಕರೆ ಮಾಡಿ ತಿಳಿಸುವಂತೆ ಇಲ್ಲವೇ ತಮ್ಮ ಹತ್ತಿರದ ಯಾವುದೇ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಇಲ್ಲವೇ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

ದೂರದೂರಿಗೆ ಹೋದವ ರೈಲು ನಿಲ್ದಾಣ ಅಥವಾ ಇತರೆಡೆ ತನ್ನ ಗೆಳೆಯರ ಗುಂಪಿನಿಂದ ಆಕಸ್ಮಿಕವಾಗಿ ಬೇರ್ಪಟ್ಟು , ಊರಿಗೆ ಮರಳಲಾಗದೇ ನಿಸ್ಸಹಾಯಕನಾದನೇ ಅಥವಾ ಬೇರೆ ಅದಾವುದೋ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದನೇ ಎನ್ನುವ ಮಾತು ಸ್ಥಳೀಯರಿಂದ ಕೇಳಿಬಂದಂತಿದ್ದು ಪೊಲೀಸ್ ತನಿಕೆಯಿಂದ ನಿಜಾಂಶ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version