Important
Trending

ಕುಮಟಾದಲ್ಲಿ ಇಂದು 45 ಕರೊನಾ ಕೇಸ್ ದಾಖಲು

ಗ್ರಾಮೀಣ ಭಾಗದಲ್ಲಿ ಕರೊನಾ ರಣಕೇಕೆ
ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1242 ಕ್ಕೆ ಏರಿಕೆ

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು ಕರೊನಾ ಅಬ್ಬರಿಸಿದ್ದು ಬರೋಬ್ಬರಿ 45 ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಕತಗಾಲ್‌ನಲ್ಲಿ 7, ವಾಲಗಳ್ಳಿ 6, ಮಿರ್ಜಾನ್ 3, ಹಂದಿಗೋಣ 3, ಹೆಗಡೆ 2, ಬಾಡ 2 ಸೇರಿದಂತೆ ಹುಬ್ಬಣಗೇರಿ, ಯಾಣ, ಬೆಟ್ಕುಳಿ, ಕಲ್ಲಬ್ಬೆ, ಗುಡ್‌ಕಾಗಲ್, ಬಗ್ಗೋಣ, ದೇವರಬಾವಿ, ಕಿಮಾನಿ ಮುಂದಾದ ಭಾಗಗಳಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಮಿರ್ಜಾನಿನ 18 ವರ್ಷದ ಯುವತಿ, 28 ವರ್ಷದ ಯುವತಿ, 27 ವರ್ಷದ ಯುವಕ, ಹೆಗಡೆಯ 36 ವರ್ಷದ ಪುರುಷ, 47 ವರ್ಷದ ಮಹಿಳೆ, ಕಲ್ಲಬ್ಬೆಯ 48 ವರ್ಷದ ಪುರುಷ, ವಕ್ಕನಳ್ಳಿಯ 32 ವರ್ಷದ ಮಹಿಳೆ, ಬಾಡದ 9 ವರ್ಷದ ಬಾಲಕಿ, 70 ವರ್ಷದ ವೃದ್ಧೆಗೆ ಪಾಸಿಟಿವ್ ಬಂದಿದೆ.

ಕತಗಾಲ್‌ನ 15 ವರ್ಷದ ಬಾಲಕ, 19 ವರ್ಷದ ಯುವತಿ, 45 ವರ್ಷದ ಮಹಿಳೆ, 20 ವರ್ಷದ ಯುವತಿ, 6 ವರ್ಷದ ಬಾಲಕಿ, 18 ವರ್ಷದ ಯುವತಿ, 9 ವರ್ಷದ ಬಾಲಕ, ಅಳ್ಕೋಡ್‌ನ 19 ವರ್ಷದ ಯುವತಿ, ವಾಲಗಳ್ಳಿಯ 64 ವರ್ಷದ ಮಹಿಳೆ, 46 ವರ್ಷದ ಪುರುಷ, 76 ವರ್ಷದ ವೃದ್ಧ, 39 ವರ್ಷದ ಮಹಿಳೆ, 2 ವರ್ಷದ ಮಗು, 17 ವರ್ಷದ ಬಾಲಕಿಗೂ ಸೋಂಕು ಕಾಣಿಸಿಕೊಂಡಿದೆ.

ಹುಬ್ಬಣಗೇರಿಯ 45 ವರ್ಷದ ಮಹಿಳೆ, ಯಾಣದ 25 ಯುವತಿ, 48 ವರ್ಷದ ಮಹಿಳೆ, 57 ವರ್ಷದ ಮಹಿಳೆ, ಬೆಟ್ಕುಳಿಯ 19 ವರ್ಷದ ಯುವಕ, ಕಲ್ಲಬ್ಬೆಯ 50 ವರ್ಷದ ಮಹಿಳೆ, ತಾರಿಬಾಗಿಲಿನ 38 ವರ್ಷದ ಪುರುಷ, ಗುಡ್‌ಕಾಗಲ್‌ನ 65 ವರ್ಷದ ವೃದ್ಧ, ಬಗ್ಗೋಣದ 47 ವರ್ಷದ ಪುರುಷ, ಮೂರೂರಿನ 68 ವರ್ಷದ ವೃದ್ಧ, ಹೆರವಟ್ಟಾದ 48 ವರ್ಷದ ಪುರುಷ, ಹಿರೇಗುತ್ತಿಯ 58 ವರ್ಷದ ಮಹಿಳೆ, 26 ವರ್ಷದ ಯುವಕಗೆ ಸೋಂಕು ದೃಢಪಟ್ಟಿದೆ.

ಕುಮಟಾದ 55 ವರ್ಷದ ಮಹಿಳೆ, 18 ವರ್ಷದ ಯುವಕ, ಕಿಮಾನಿಯ 36 ವರ್ಷದ ಪುರುಷ, ಉಪ್ಪಾರ್‌ಕೇರಿಯ 18 ವರ್ಷದ ಯುವಕ, ದೇವರಬಾವಿಯ 16 ವರ್ಷದ ಬಾಲಕಿ, ಹಂದಿಗೋಣದ 40 ವರ್ಷದ ಪುರುಷ, 3 ವರ್ಷದ ಮಗು, 11 ವರ್ಷದ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ. ಇಂದು 45 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1242 ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ
ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ದೈವಜ್ಞ ಪಂಡಿತ್ ಪಿ. ಶ್ರೀರಾಮ್ ಆಚಾರ್ಯ:-9606187089
( ಜಾಹೀರಾತು )

Back to top button