ಜಿಲ್ಲೆಯ ಭಾವಕವಿ ಉಮೇಶ ಮುಂಡಳ್ಳಿಯವರ ಸಾಲುಮರದ ತಿಮ್ಮಕ್ಕ ಹಾಡು ಬಿಡುಗಡೆ

ಭಟ್ಕಳ – ಸ್ವಾರ್ಥ ತುಂಬಿದ ಸಮಾಜದಲ್ಲಿ ನಿಸ್ವಾರ್ಥ ದಿಂದ ಗಿಡಗಳನ್ನು ನೆಟ್ಟು ಮಕ್ಕಳಂತೆ ಅದರ ಪಾಲನೆ ಪೋಷಣೆ ಮಾಡಿದಂತ ಜಗತ್ತು ಮೆಚ್ಚಿದ ಪರಿಸರ ಸ್ನೇಹಿ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ನ ಕುರಿತು  ಮಧುರವಾದ ಗೀತೆಯೊಂದು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿರುತ್ತದೆ.

ಜಿಲ್ಲೆಯ ಭಾವಕವಿ ರಾಜ್ಯ ಪ್ರಶಸ್ತಿ  ಪುರಸ್ಕೃತ ಗಾಯಕ ಉಮೇಶ ಮುಂಡಳ್ಳಿಯವರ ಸಾಹಿತ್ಯ ಇದಾಗಿದ್ದು ಈ ಗೀತೆಗೆ ನಾಡಿನ ಹೆಸರಾಂತ ಸಂಗೀತ ನಿರ್ದೇಶಕಿ ಗಾಯಕಿ ಬೆಂಗಳೂರಿನ ಶ್ರೀಮತಿ ಇಂದು ವಿಶ್ವನಾಥ ಸಂಗೀತ ಸಂಯೋಜನೆ ಮಾಡಿ ಹಾಡಿರುತ್ತಾರೆ. ನಾಗಭೂಷಣ ಉಡುಪ ಹಾಗೂ ಪ್ರದ್ಯುಮ್ನ ಸಂಗೀತ  ಸಹಕಾರ ನೀಡಿರುತ್ತಾರೆ. ಇಂದು ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಗೀತೆಗೆ ಹೇಮಂತ ಜೆ ಸಂಕಲನ ಇರುತ್ತದೆ.

ವಿಸ್ಮಯ ನ್ಯೂಸ್, ಭಟ್ಕಳ

Exit mobile version