
ಯಲ್ಲಾಪುರ: ತಾಲೂಕಿನಲ್ಲಿ ಮಂಗಳವಾರ 10 ಜನರಿಗೆ ಕೊರೊನಾ ಧೃಢಪಟ್ಟಿದ್ದು, 23 ಮಂದಿ ಗುಣಮುಖರಾಗಿದ್ದಾರೆ. ಇಂದು ಹಂಡ್ರಮನೆಯಲ್ಲಿ 5, ಚಂದಗುಳಿಯಲ್ಲಿ 2 ಹಾಗೂ ಕಾಳಮ್ಮನಗರ, ರವೀಂದ್ರನಗರ, ಉಪಳೇಶ್ವರಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಈವರೆಗೆ ಗುಣಮುಖರಾದವರ ಸಂಖ್ಯೆ 765 ಕ್ಕೇರಿದೆ.
ಶಿರಸಿಯಲ್ಲಿಂದು 5 ಮಂದಿಗೆ ಪಾಸಿಟಿವ್:
ಶಿರಸಿ: ತಾಲೂಕಿನಲ್ಲಿಂದು ಐವರಿಗೆ ಕೊರೊನಾ ದೃಢಪಟ್ಟಿದ್ದು, 8 ಮಂದಿ ಗುಣಮುಖರಾಗಿದ್ದಾರೆ.
ಮಾರುತಿಗಲ್ಲಿಯಲ್ಲಿ 1, ದೊಡ್ನಳ್ಳಿಯಲ್ಲಿ 2, ಚಿಪಗಿಯಲ್ಲಿ 1, ಎಪಿಎಮ್ಸಿ ಮಾರ್ಕೇಟ್ ಹತ್ತಿರದಲ್ಲಿ 1 ಕೇಸ್ ದೃಢವಾಗಿದೆ.
ಅಂಕೋಲಾದಲ್ಲಿಂದು 4 ಕೊವಿಡ್ ಕೇಸ್
ಅಂಕೋಲಾ : ಮಂಗಳವಾರ ತಾಲೂಕಿನಲ್ಲಿ 4 ಹೊಸ ಕೊವಿಡ್ ಕೇಸ್ಗಳು ಪತ್ತೆಯಾಗಿದೆ. ತಾಲೂಕಿನ ಗಡಿ ಪ್ರದೇಶವಾದ ಬ್ರಹ್ಮೂರು-ಕಬಗಾಲ ವ್ಯಾಪ್ತಿಯ 56 ರ ಮಹಿಳೆ, 3ರ ಪುಟಾಣಿ ಬಾಲೆ, 7 ರ ಬಾಲಕ ಹಾಗೂ ಬೆಳಸೆ ವ್ಯಾಪ್ತಿಯ 42ರ ಮಹಿಳೆಯಲ್ಲಿ ಸೋಂಕು ಲಕ್ಷಣಗಳು ಧೃಡಪಟ್ಟಿವೆ.
ಗುಣಮುಖರಾದ 7 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್ಲ್ಲಿರುವ 28 ಮಂದಿ ಸಹಿತ ಒಟ್ಟೂ 45 ಸಕ್ರಿಯ ಪ್ರಕರಣಗಳಿವೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಸಾಹಿತ್ಯ ಕ್ಷೇತ್ರದಲ್ಲಿ ಅಂಕೋಲೆ ಕೊಡುಗೆ ಅನನ್ಯ: ಕೆ.ವಿ.ನಾಯಕ
- Rain Update: ಹವಾಮಾನ: ಕರಾವಳಿಯಲ್ಲಿ ಮೂರು ದಿನ ಭಾರೀ ಮಳೆ: ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚನೆ
- Job Alert: ಕ್ಯಾಶ್ಯೂ ಇಂಡಸ್ಟ್ರಿಸ್ ನಲ್ಲಿ ಉದ್ಯೋಗಾವಕಾಶ: 15 ಸಾವಿರ ಮಾಸಿಕ ವೇತನ
- Cycling: ಕಾರು ಮತ್ತು ಬೈಕ್ ಇದ್ದರೂ ಈ ಅಧಿಕಾರಿ ಪ್ರತಿದಿನ 56 ಕಿಲೋಮೀಟರ್ ಸೈಕಲ್ ರೈಡ್ ಮಾಡುವುದೇಕೆ?
- ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹ: ಶಿರಸಿಯಿಂದ ಕಾರವಾರದ ತನಕ 8 ದಿನಗಳ ಕಾಲ ಪಾದಯಾತ್ರೆ: ಅನಂತಮೂರ್ತಿ ಹೆಗಡೆ ಘೋಷಣೆ