ಪ್ರತಿಷ್ಠಿತ ಕೆನರಾ ಸಾರಸ್ವತ ಸೌಹಾರ್ದ ಸಹಕಾರಿ ನಿಯಮಿತ ಕುಮಟಾದ ಸ್ಥಾಪಕ ಅಧ್ಯಕ್ಷರು ದೈವಾದೀನ

ಕುಮಟಾ: ಕೆನರಾ ಸಾರಸ್ವತ ಸೌಹಾರ್ದ ಸಹಕಾರಿ ನಿಯಮಿತ ಕುಮಟಾ ಇದರ ಸ್ಥಾಪಕ ಅಧ್ಯಕ್ಷರಾದ ಶ್ರೀ ರಮೇಶ್ ಎಂ ಭಟ್( 80 ವರ್ಷ) ಇವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ದಿವ್ಯಾತ್ಮಕ್ಕೆ ಸದ್ಗತಿ ಕೋರಿ ಸಹಕಾರಿಯ ಕೇಂದ್ರ ಕಚೇರಿ, ಕತಗಾಲ್ ಶಾಖೆ, ಹೊನ್ನಾವರ ಶಾಖೆ ಗಳಿಗೆ ರಜೆ ಸಾರಲಾಗಿದ್ದು, ಪರಮಾತ್ಮನಲ್ಲಿ ಲೀನರಾದ ದಿವ್ಯಾತ್ಮಕ್ಕೆ ಶಾಂತಿಕೋರಿ,ಅವರ ಅಗಲುವಿಕೆಯ ದುಃಖ ಸಹಿಸುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ಆ ಪರಮಾತ್ಮ ನೀಡಲಿ ಎಂದು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷರಾದ ಶ್ರೀ ವಾಸುದೇವ ಪ್ರಭು, ಉಪಾಧ್ಯಕ್ಷರಾದ ಅರವಿಂದ್ ಕೆ ಪೈ,ಹಿರಿಯ ನಿರ್ದೇಶಕರಾದ ಅನಂತ ಪಿ ಶಾನಬಾಗ್ ಹಾಗೂ ಶ್ರೀನಿವಾಸ ಫೈ ಮತ್ತು ಎಲ್ಲ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಕುಮಟಾ

Exit mobile version