ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ

ಭಟ್ಕಳ: ತಾಲೂಕಿನ ಅರಬ್ಬೀ ಸಮುದ್ರ 15 ನಾಟಿಕಲ್ ದೂರದ ನೇತಾಣಿ ದ್ವೀಪದ ಸಮೀಪ ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾದ ಘಟನೆ ಇಂದು ನಡೆದಿದೆ. ಬೆಳಂಬಾರು ಮೂಲದ ಸುರೇಶ್ ಕಾರ್ವಿ ಎಂಬುವವರಿಗೆ ಸೇರಿದ ಮತ್ಸ್ಯಾಂಜನೇಯ ಹೆಸರಿನ ಬೋಟ್ ಮುಳುಗಡೆಯಾಗಿದೆ ಎಂದು ತಿಳದುಬಂದಿದೆ. ಈ ಬೋಟ್ ನಲ್ಲಿ ಮೂವರು ಮೀನುಗಾರರು ಇದ್ದರು. ಬೋಟ್ ಮುಳುತ್ತಿರುವ ವೇಳೆ ಈ ಮೂವರು ಅಪಾಯಕ್ಕೆ ಸಿಲುಕಿದ್ದರು.

ಆದರೆ, ಮೀನುಗಾರಿಕೆ ಗೆ ತೆರಳಿದ ಇನ್ನೊಂದು ಬೋಟಿನ ಸಹಾಯಾದಿಂದ ಮೂವರೂ ಮೀನುಗಾರರನ್ನು ರಕ್ಷಣೆ ಮಾಡಲಾಗಿರುವ ಬಗ್ಗೆ ಮಾಹಿತಿ ದೊರಕಿದೆ. ಕೋಸ್ಟಲ್ ಪೋಲೀಸರಿಂದ ಬೋಟ್ ದಡಕ್ಕೆ ಎಳೆತರಲು ಪ್ರಯತ್ನ ಮುಂದುವರಿದಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version