ಅಪರೂಪದ ಕಡಲಾಮೆಗಳ ಮೊಟ್ಟೆ ಪತ್ತೆ: ಬಂದರು ನಿರ್ಮಾಣಕ್ಕೆ ವಿರೋಧಿಸುತ್ತಿರುವ ಸ್ಥಳೀಯರ ವಾದಕ್ಕೆ ಪುಷ್ಠಿ?

ಬಂದರು ನಿರ್ಮಾಣವಾಗುತ್ತಿರುವ ಪ್ರದೇಶದಲ್ಲಿ ನೂರಾರು ಮೊಟ್ಟೆ ಪತ್ತೆ
ಸ್ಥಳೀಯರ ವಾದಕ್ಕೆ ಸಿಕ್ಕಿದೆ ಪುಷ್ಠಿ
ಇಂಥ ಅಪರೂಪದ ಸುರಕ್ಷಿತ ತಾಣದಲ್ಲಿ ಬಂದರು ನಿರ್ಮಾಣ ಬೇಕೆ?
ಮೀನುಗಾರರು, ಸಾರ್ವಜನಿಕರ ಪ್ರಶ್ನೆ?

ಹೊನ್ನಾವರ: ಕಾಸರಕೋಡ ಟೋಂಕದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಖಾಸಗಿ ಬಂದರು ಪ್ರದೇಶವು ಅಪರೂಪದ ಕಡಲಾಮೇಗಳ ಸುರಕ್ಷಿತ ತಾಣ ಎಂಬ ಮಾತುಗಳು ಕೇಳಿಬರುತ್ತಿದ್ದವು. ಸ್ಥಳೀಯರ ಈ ವಾದಕ್ಕೆ ಈಗ ಪುಷ್ಟಿ ದೊರೆತಿದೆ.

ಇಲ್ಲಿ ನೂತನವಾಗಿ ಖಾಸಗಿಕಂಪನಿಯವರು ನಿರ್ಮಿಸುತ್ತಿರುವ ವಿವಾದಾತ್ಮಕ ಬಂದರು ಸಮೀಪದ ರಸ್ತೆ ಪಕ್ಕ ಕಡಲಾಮೆಗಳು ತಮ್ಮ ಸಂತತಿಗಳ ಬೆಳವಣಿಗೆ ಗಾಗಿ ನೂರಾರು ಸಂಖ್ಯೆಯಲ್ಲಿ ಮೊಟ್ಟೆಗಳನ್ನಿಟ್ಟ ಅಪರೂಪದ ವಿದ್ಯಮಾನ ಬೆಳಕಿಗೆ ಬಂದಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಕಡಲಾಮೆಯ ಮೊಟ್ಟೆಗಳನ್ನು ಸಂಗ್ರಹಣೆಮಾಡುತ್ತಿರುವದನ್ನು ಕಾಣಬಹುದು. ಈ ಪ್ರದೇಶವು ಅಪರೂಪದ ಕಡಲಾಮೆಗಳ ಮೊಟ್ಟೆ ಇಡುವ ತಾಣವೆಂದು ಗುರುತಿಸಲ್ಪಾಟ್ಟಿದ್ದರು, ಮೀನೀನ ಸಂತತಿಯೊoದಿಗೆ ಲಕ್ಷಾಂತರ ಮೀನುಗಾರರ ಬದುಕಿಗೆ ಮಾರಕವಾಗುವುದೆಂದು ಗೊತ್ತಿದ್ದರೂ ಈ ಪ್ರದೇಶದಲ್ಲಿ ಖಾಸಗಿ ಬಂದರು ನಿರ್ಮಾಣಮಾಡಲು ಹೊರಟಿರುವುದು ವಿರೋಧಕ್ಕೆ ಕಾರಣವಾಗಿದೆ. ಕಳೆದ ಹತ್ತು ದಿವಸಗಳಿಂದ ಇಲ್ಲಿನ ಖಾಸಗಿ ಬಂದರು ನಿರ್ಮಾಣ ಕಾಮಗಾರಿ ತಡೆದು ಈ ಪ್ರದೇಶದಲ್ಲಿ ಧರಣಿ ನಡೆಸುತ್ತಿದ್ದಾರೆ.

ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಭಾಗದ ಸ್ಥಳಿಯರು ಮತ್ತು ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಡುವಿನ ನಿತ್ಯದ ಗುದ್ದಾಟಕ್ಕೆ ಕಾರಣವಾಗಿರುವ ಖಾಸಗಿ ಬಂದರು ನಿರ್ಮಾಣದ ಬಗೆಗಿನ ಗೊಂದಲ ಮತ್ತಷ್ಟು ಬಿಗಡಾಯಿಸಿದೆ. ಆರಂಭದಿoದಲೂ ಕಾಮಗಾರಿಯನ್ನು ವಿರೋಧಿಸುತ್ತಾ ಬಂದಿದ್ದ ಸ್ಥಳಿಯ ಮೀನುಗಾರರಿಗೆ ಬಂದರು ನಿರ್ಮಾಣವಾದ ನಂತರ ತಮ್ಮನ್ನು ಹಂತ ಹಂತವಾಗಿ ಒಕ್ಕಲೆಬ್ಬಿಸುತ್ತಾರೆನ್ನುವ ಅಭದ್ರತೆ ಕಾಡುತ್ತಿದೆ.

ಜೊತೆಗೆ ಕುಲಕಸುಬಾದ ಮೀನುಗಾರಿಕೆ ಸಂಪೂರ್ಣ ನಶಿಸುವ ಭಯದಲ್ಲಿ ಕಾಮಗಾರಿಯೇ ಬೇಡ ಎನ್ನುತ್ತಿದ್ದು ಸಾವಿರಾರು ಪೊಲೀಸರ ರಕ್ಷಣೆಯಲ್ಲಿ ರಸ್ತೆ ನಿರ್ಮಾಣಕ್ಕೆ ಖಾಸಗಿ ಕಂಪನಿ ಮುಂದಾಗಿದ್ದು, ಗ್ರಾಮಸ್ಥರ ವಿರೋದಕ್ಕೆ ಮಣಿದು ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿದೆ. ಹೀಗಾಗಿ ಕಳೆದ ಹತ್ತು ದಿನಗಳಿಂದ ಮೀನುಗಾರ ಮಹಿಳೆಯರು ರಸ್ತೆಯಲ್ಲಿ ಕೆಲಸ ಮಾಡಬಾರದು ಎಂದು ಧರಣಿಕುಳಿತಿದ್ದಾರೆ .ಇಲ್ಲಿ ಬಂದರು ನಿರ್ಮಾಣಮಾಡುವುದು ಬೇಡ ಎಂದು ಪಟ್ಟುಹಿಡಿದು ಕುಳಿತಿದ್ದಾರೆ.

ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ )  ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version