Follow Us On

WhatsApp Group
ಮಾಹಿತಿ
Trending

ಗಾಂವಕರ ಮೇಮೊರಿಯಲ್‌ನ 9ನೇ ವರ್ಷದ ಪ್ರತಿಭಾ ಪುರಸ್ಕಾರ

ಅಂಕೋಲಾ : ಸ್ವಾತಂತ್ರ ಯೋಧ, ಬಹುಮುಖಿ ವ್ಯಕ್ತಿತ್ವದ ಅಭಿವೃದ್ಧಿ ಹರಿಕಾರರಾಗಿದ್ದ ದಿ. ಬಾಸಗೋಡ ಬೊಮ್ಮಯ್ಯ ರಾಕು ಗಾಂವಕರ ಇವರ ಹೆಸರಿನಲ್ಲಿ ಸ್ಥಾಪನೆಯಾದ ಗಾಂವಕರ ಮೆಮೋರಿಯಲ್ ಫೌಂಡೇಶನ ಬಾಸಗೋಡ ಅಂಕೋಲಾ ಇದರ 9ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಉಪನ್ಯಾಸ ಕಾರ್ಯಕ್ರಮ 27.02.2021ನೇ ಶನಿವಾರ ಸಂಜೆ 4 ಘಂಟೆಗೆ ‘ಸಾಧನಾ ವೇದಿಕೆ’ ಸ್ವಾತಂತ್ರ ಸಂಗ್ರಾಮ ಭವನ ಅಂಕೋಲಾ ದಲ್ಲಿ ನಡೆಯಲಿದ್ದು, ಉ.ಕ.ಜಿಲ್ಲೆಯ 10 ತಾಲೂಕುಗಳ ವಿವಿಧ ಸಮುದಾಯಗಳ ಹಾಗೂ ಬೇರೆ, ಬೇರೆ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ 10 ಪ್ರತಿಭಾನ್ವತರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.

ವಿಶೇಷ ಉಪನ್ಯಾಸ : ಉಪನ್ಯಾಸಕರಾಗಿ ದೆಹಲಿ ಪಾರ್ಲಿ ಮೆಂಟ್ ಭವನದಲ್ಲಿ ನಡೆದ 2021ರ ನ್ಯಾಷನೆಲ್ ಯುಥ್ ಪಾರ್ಲಿಮೆಂಟ್ ಫೆಸ್ಟಿವೆಲ್‌ನಲ್ಲಿ ಭಾಗವಹಿಸಿದ ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾನೂನು ಪದವಿ ಕಾಲೇಜ್ ವಿದ್ಯಾರ್ಥಿ ಶರ್ವಾಣಿ ಗೌಡ ಇವರು ‘ರಾಷ್ಟç ನಿರ್ಮಾಣದಲ್ಲಿ ಯುವಜನಾಂಗದ ಪಾತ್ರ’ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಗಣ್ಯರು ಉಪಸ್ಥಿತ ರಿರಲಿದ್ದಾರೆ. ಈ ಕಾರ್ಯಕ್ರಮಕ್ಕೆ ಫೌಂಡೇಶನ್ ಅಧ್ಯಕ್ಷ ದೇವಾನಂದ ಬಿ.ಗಾಂವಕರ ಬಾಸಗೋಡ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ

Back to top button