Follow Us On

WhatsApp Group
ಮಾಹಿತಿ
Trending

ವಿಶ್ವ ವಿದ್ಯಾ‌ಚಾತುರ್ಮಾಸ್ಯ: ರಾಘವೇಶ್ವರ‌‌ ಶ್ರೀಗಳ‌ ಪುರಪ್ರವೇಶ

ಬೆಂಗಳೂರು:ರಾಘವೇಶ್ವರ ಶ್ರೀಗಳ 28ನೇ ಚಾತುರ್ಮಾಸ ಆಷಾಢ ಪೂರ್ಣಿಮೆ (ಜುಲೈ 24) ಯಿಂದ ಭಾದ್ರಪದ ಪೂರ್ಣಿಮೆ (ಸೆಪ್ಟೆಂಬರ್ 20) ವರೆಗೆ ಇಲ್ಲಿನ ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯಲಿದೆ.

ಅರಿವಿನ ಹಣತೆಯ ಹಚ್ಚೋಣ- ವಿದ್ಯಾವಿಶ್ವವ ಕಟ್ಟೋಣ ಎಂಬ ಧ್ಯೇಯವಾಕ್ಯದೊಂದಿಗೆ ಈ ಚಾತುರ್ಮಾಸ್ಯವನ್ನು ವಿಶ್ವವಿದ್ಯಾ ಚಾತುರ್ಮಾಸ್ಯವಾಗಿ ಆಚರಿಸಲಾಗುತ್ತಿದೆ.‌ ಇಂದು ಚಾತುರ್ಮಾಸ್ಯ ಪೂರ್ವಭಾವಿಯಾಗಿ ಶ್ರೀಗಳ ಪುರಪ್ರವೇಶ ವೈಭವದಿಂದ ನಡೆಯಿತು.

ಕೋವಿಡ್‌ ಸನ್ನಿವೇಶದಲ್ಲಿ ಚಾತುರ್ಮಾಸ್ಯ ಅವಧಿಯಲ್ಲಿ ಸರ್ಕಾರ ಸೂಚಿಸುವ ಎಲ್ಲ ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಿದ್ದು, ಭಿಕ್ಷಾಸೇವೆ, ಪಾದುಕಾಪೂಜೆಯಂಥ ಧಾರ್ಮಿಕ ವಿಧಿವಿಧಾನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಇದಕ್ಕೆ ಶಿಷ್ಯರು ಸಹಕರಿಸಬೇಕು ಎಂದು ಪ್ರಕಟಣೆ ಮನವಿ ಮಾಡಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button