ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಅಂಕೋಲಾ ಜೂ 15:  ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಬುಧವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ನಡೆಯಿತು.  ಸಂಘದ ನೂತನ ಅಧ್ಯಕ್ಷರಾಗಿ ಉದಯವಾಣಿ ಪತ್ರಿಕೆಯ ವರದಿಗಾರ ಅರುಣ ಶೆಟ್ಟಿ, ಕಾರ್ಯದರ್ಶಿಯಾಗಿ ವಿಜಯವಾಣಿ ಪತ್ರಿಕೆಯ ವರದಿಗಾರ ವಿದ್ಯಾಧರ ಮೊರಬಾ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಗೌರವಾಧ್ಯಕ್ಷರಾಗಿ ರಾಘು ಕಾಕರಮಠ ( ಕನ್ನಡ ಪ್ರಭ ), ಉಪಾಧ್ಯಕ್ಷರಾಗಿ ನಾಗರಾಜ ಮಂಜಗುಣಿ (ವಿಜಯ ಕರ್ನಾಟಕ ) ಮತ್ತು ವರದಿಗಾರ ವಾಸುದೇವ ಗುನಗಾ (ಕರಾವಳಿ ಮುಂಜಾವು ), ಖಜಾಂಚಿಯಾಗಿ ಮಾರುತಿ ಹರಿಕಂತ್ರ ( ಪ್ರಜಾವಾಣಿ), ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕರಾವಳಿ ಮುಂಜಾವು ವರದಿಗಾರರಾದ ಕೆ.ರಮೇಶ, ಸುಭಾಷ್ ಕಾರೆಬೈಲ್, ತಾಲೂಕು ಸಮಿತಿ ಸದಸ್ಯರಾಗಿ ಅಕ್ಷಯ ನಾಯ್ಕ ಬಬ್ರುವಾಡಾ (ನುಡಿಜೇನು ), ನಾಗರಾಜ ಜಾಂಬಳೇಕರ (ಕೊಂಕಣ ವಾಹಿನಿ), ಜಿಲ್ಲಾ ಸಮಿತಿ ಸದಸ್ಯರಾಗಿ ವಿಠಲದಾಸ ಕಾಮತ (ಹೊಸದಿಗಂತ )ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಅಂಕೋಲಾ ಸ. ಪ.ಪೂ.ಕಾಲೇಜಿನ ಉಪನ್ಯಾಸಕ ಮಹೇಶ ಬಿ. ನಾಯಕ ಆಗಮಿಸಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version