Uttara Kannada
Trending

ಹೊನ್ನಾವರ, ಕುಮಟಾ, ಶಿರಸಿಯ ಕರೊನಾ ಕುರಿತ ಇಂದಿನ ಮಾಹಿತಿ ಇಲ್ಲಿದೆ

ಹೊನ್ನಾವರದಲ್ಲಿ ಆರು ಪಾಸಿಟಿವ್?:
ಹೊನ್ನಾವರ: ಹೊನ್ನಾವರ ತಾಲೂಕಿನಲ್ಲಿ ಬುಧವಾರ ಒಟ್ಟು ಆರು ಕರೊನಾ ಕೇಸ್ ದೃಢಪಟ್ಟಿದೆ. ©Copyright reserved by Vismaya tv ಕಿಂತಾಲಕೇರಿಯಲ್ಲಿ ನಾಲ್ಕು, ಕೆಳಗಿನೂರಿನ ಇಬ್ಬರಲ್ಲಿ ಸೋಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೆಲದಿನಗಳ ಹಿಂದೆ ಮೃತಪಟ್ಟ ಕಿಂತಾಲಕೇರಿ ವ್ಯಕ್ತಿಯ ಸಂಪರ್ಕಕ್ಕೆ ಬಂದ ಮೂವರಿಗೆ ಸೋಂಕು ಕಾಣಿಸಿಕೊಂಡಿದೆ.ಇನ್ನು ಸೋಮವಾರ ಹೊಸಪಟ್ಟಣದ 58 ವರ್ಷದ ಪುರುಷನಿಗೆ ಹೊನ್ನಾವರ ನಡೆದ ರ್ಯಾಪಿಡ್ ಟೆಸ್ಟ್ ನಲ್ಲಿ ನೆಗಟಿವ್ ಬಂದದ್ದು, ಮನೆಗೆ ಮರಳಿದ್ದರು. ಈಗ ಅವರ ಪತ್ನಿಗೂ ಪಾಸಿಟಿವ್ ಬಂದಿದೆ.

ಕುಮಟಾದಲ್ಲಿ ಇಂದು ದಾಖಲಾದ ಪ್ರಕರಣ ಎಷ್ಟು?:
ಕುಮಟಾ: ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಕಳೆದೆರಡು ದಿನದಿಂದ ಗಣನೀಯ ಪ್ರಮಾಣದ ಕುಸಿತ ಕಂಡಿರುವುದು ಸಾರ್ವಜನಿಕರು ನಿಟ್ಟುಸಿರು ಬಿಡುವಂತೆ ಮಾಡಿದೆ. ©Copyright reserved by Vismaya tv ಇಂದು ಒಂದೇ ಪ್ರಕರಣ ದಾಖಲಾದ ಕುರಿತು ಮಾಹಿತಿ ಬಂದಿದೆ. ಕಾಗಾಲ್ ನ 26 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.

ಶಿರಸಿಯಲ್ಲಿ ಇಂದು 10ಕ್ಕಿಂತ ಹೆಚ್ಚು ಕರೊನಾ ಕೇಸ್?
ಶಿರಸಿ: ತಾಲೂಕಿನಲ್ಲಿ ಕರೊನಾ ಆರ್ಭಟ ಇಂದು ನಗರಭಾಗದಲ್ಲಿ ಹೆಚ್ಚಿದೆ ಎನ್ನಲಾಗಿದೆ. ಲಯನ್ಸ್ ನಗರ, ಭೀಮನಗುಡ್ಡ, ಕಸ್ತೂರಾಬಾ ನಗರ, ವಿಜಯನಗರದಲ್ಲಿ ಸೋಂಕು ಕಾಣಿಸಿಕೊಂಡಿದೆ.

ಈ ಕುರಿತ ನಿಖರ ಅಂಕಿ-ಸಂಖ್ಯೆ, ಮಾಹಿತಿ ಹೆಲ್ತ್ ಬುಲೆಟಿನ್ ನಲ್ಲಿ ಅಧಿಕೃತಗೊಳ್ಳಲಿದೆ. ಅಲ್ಲದೆ, ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ಹೆಚ್ಚಿನ ಮಾಹಿತಿಯನ್ನು ವೀಕ್ಷಿಸಿ..

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

[sliders_pack id=”2570″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button