Focus NewsImportant
Trending

ಕಡಲಿನಲ್ಲಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದ ವೇಳೆ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತ: ನೌಕಾಪಡೆ ನೆರವು

ಕಾರವಾರ: ಕಡಲಿನಲ್ಲಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದ ವೇಳೆ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಮೀನುಗಾರರಿಗೆ ಭಾರತೀಯ ನೌಕಾಪಡೆ ನೆರವಾಗಿದೆ. ಮೀನುಗಾರಿಕಾ ಬೋಟು ಕಾರವಾರ ವ್ಯಾಪ್ತಿಯಿಂದ ಹೊರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಗ್ನಿ ಅವಘಡ ನಡೆದಿದ್ದು, ಓರ್ವ ಮೀನುಗಾರ ಸುಟ್ಟ ಗಾಯಗಳಿಂದ ನರಳುತ್ತಿದ್ದ. ಈ ಕುರಿತು ಬೋಟ್ ನಿಂದ ಬಂದ ಮಾಹಿತಿ ಆಧಾರದಲ್ಲಿ ಸ್ಥಳಕ್ಕೆ ತೆರಳಿದ ಭಾರತೀಯ ನೌಕಾಪಡೆಯ ಹಡಗು ಮತ್ತು ವೈದ್ಯಕೀಯ ತಂಡ ತುರ್ತು ವೈದ್ಯಕೀಯ ನೆರವು ನೀಡಿ, ಜೀವ ಉಳಿಸಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button