ಅಗ್ನಿಶಾಮಕ ಇಲಾಖೆಯ ನಿವೃತ್ತ ನೌಕರ ಕುಮಾರ ನಾಯ್ಕ ವಿಧಿವಶ

ಅಂಕೋಲಾ: ಅಗ್ನಿಶಾಮಕ ಇಲಾಖೆಯ ನಿವೃತ್ತ ನೌಕರ ಕುಮಾರ ನಾಯ್ಕ ವಿಧಿವಶ. ಹುಬ್ಬಳ್ಳಿ , ಭಟ್ಕಳ , ಕಾರವಾರ , ಅಂಕೋಲಾಗಳಲ್ಲಿಯೂ ಸೇವೆ ಅಂಕೋಲಾ : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನಿವ್ರತ್ತ ನೌಕರ , ಪಟ್ಟಣ ವ್ಯಾಪ್ತಿಯ ಕಲಭಾಗ (ಅಂಬಾರಕೊಡ್ಲ) ನಿವಾಸಿ ಕುಮಾರ್ ಎಸ್ ನಾಯ್ಕ (64 ), ಅವರು ಅಕಾಲಿಕ ವಿಧಿವಶರಾಗಿದ್ದಾರೆ.

ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 31 ರಷ್ಟು ಅಧಿಕ ಮಳೆ

ಹುಬ್ಬಳ್ಳಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹೊನ್ನಾವರ ಅಂಕೋಲಾ ಅಗ್ನಿಶಾಮಕ ಠಾಣೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಇವರು ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಮೃತರು ಪತ್ನಿ , ಒರ್ವ ಪುತ್ರ , ಸಹೋದರ ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ ತೊರೆದಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version