Follow Us On

WhatsApp Group
Uttara Kannada
Trending

ಸರಳತೆ ಮೂಲಕ ಜನಮೆಚ್ಚುಗೆ ಪಡೆದ ಆಪ್ತ ಕಾರ್ಯದರ್ಶಿ ಅಶೋಕ ಭಟ್ಟ ಅವರು ತಹಶೀಲ್ದಾರ್ ಆಗಿ ಮುಂಬಡ್ತಿ: ವಿಸ್ಮಯ ಟಿ.ವಿ ಪರವಾಗಿ ಅಭಿನಂದನೆ

ಕುಮಟಾ: ಕಳೆದ ಮೂರು ವರ್ಷದಿಂದ ಶಾಸಕ ದಿನಕರ ಶೆಟ್ಟಿಯವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಶೋಕ ಭಟ್ಟ ಅವರು ಬೈಂದೂರ ತಹಶೀಲ್ದಾರರಾಗಿ ಮುಂಬಡ್ತಿ ಹೊಂದಿದ್ದಾರೆ. ಮೂಲತ: ಹೊನ್ನಾವರ ತಾಲೂಕಿನ ನವೀಲಗೋಣದವರಾದ ಅಶೋಕ್ ಭಟ್ಟ ಅವರು, ತಮ್ಮ ಸರಳತೆ ಮೂಲಕ ಜನಪ್ರಿಯತೆ ಗಳಿಸಿದ್ದರು. ಕಡುಬಡತನದಲ್ಲಿ ಬೆಳೆದು, ಪರಿಶ್ರಮದ ಮೂಲಕ ಹಂತಹoತವಾಗಿ ಉನ್ನತ ಹುದ್ದೆಗೆ ಏರಿದ ಅಶೋಕ್ ಭಟ್ಟ ಅವರಿಗೆ ಜನಸಾಮಾನ್ಯರ ಕಷ್ಟದ ಅರಿವಿದೆ. ಹೀಗಾಗಿ ಶಾಸಕರಲ್ಲಿ ಕಷ್ಟ ಹೇಳಿಕೊಳ್ಳಲು ಬರುವ ಪ್ರತಿಯೊಬ್ಬರನ್ನೂ ಮಾತನಾಡಿಸಿ, ಅವರಿಗೆ ಕೈಲಾದ ಸಹಾಯ ಮಾಡುವ ಗುಣ ಬೆಳೆಸಿಕೊಂಡಿದ್ದಾರೆ.

ಗ್ರಾಮ ಲೆಕ್ಕಿಗರ ಹುದ್ದೆ, ರೆವೆನ್ಯೂ ಅಧಿಕಾರಿಯಾಗಿ ಮತ್ತು ಉಪ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸಿದ ಅನುಭವಿದೆ. ಅಲ್ಲದೆ, ಮಂಕಾಳು ವೈದ್ಯ ಅವರು ಆಪ್ತಕಾರ್ಯದರ್ಶಿಯಾಗಿ ನಿಯುಕ್ತಿಗೊಂಡು ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದು, ಅಲ್ಲೂ ತಮ್ಮ ಚುರುಕುತನದಿಂದ ಜನಮೆಚ್ಚುಗೆ, ಜನಪ್ರಿಯತೆ ಗಳಿಸಿದ್ದರು. ಹೌದು, ಬೈಂದೂರು ತಹಶೀಲ್ದಾರ್ ಆಗಿ ನಿಯುಕ್ತಿಗೊಂಡಿರುವ ಶಾಸಕ ದಿನಕರ ಶೆಟ್ಟಿಯವರ ಆಪ್ತ ಕಾರ್ಯದರ್ಶಿ ಅಶೋಕ್ ಭಟ್ಟ ಅವರ ಮುಂದಿನ ಜೀವನ ಸುಖಕರವಾಗಿರಲಿ. ಮತ್ತಷ್ಟು ಉನ್ನತ ಹುದ್ದೆ ಅವರನ್ನು ಅರಸಿ ಬರಲಿ ಎಂದು ವಿಸ್ಮಯ ಟಿ.ವಿಯ ಆಶಯವಾಗಿದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button