Follow Us On

WhatsApp Group
Uttara Kannada
Trending

ಶಿರಸಿಯಲ್ಲಿ ಏಕಾಏಕಿ ವರುಣನ ಅಬ್ಬರ; ಕೆಲವಡೆ ಆಲಿಕಲ್ಲು ಮಳೆ

ಶಿರಸಿ: ತಾಲೂಕಿನ ಹಲವಡೆ ಒಂದು ಗಂಟೆಗೂ ಹೆಚ್ಚು ಕಾಲ ಗಾಳಿ ಸಹಿತ ಅಬ್ಬರದ ಮಳೆ ಸುರಿದಿದ್ದು, ಮಳೆಯಿಂದಾಗಿ ಶಿರಸಿ ನಗರದ ಹಲವು ಭಾಗದಲ್ಲಿ ರಸ್ತೆಗಳು ನೀರಿನಿಂದ ತುಂಬಿ ವಾಹನ ಸವಾರರು ಪರೆದಾಡುವಂತಾಯಿತು.

ಒಂದೇ ಸಮನೆ ಏಕಾಏಕಿ ಜೋರಾದ ಸುರಿದ ಮಳೆಗೆ ಶಿರಸಿ- ಸಿದ್ದಾಪುರ ಭಾಗದ‌ ಜನರು ಕಂಗಾಲಾಗಿದ್ದರು. ಕೆಲ ಕಾಲ ವಾಹನ ಸವಾರರು ಪರದಾಡುವಂತಾಯಿತು. ಕೆಲವೊಂದು ಕಡೆ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಇದರಿಂದ ಬೆಳೆಗೆ ಹಾನಿಯಾಗಿದೆ.

ಹವಾಮಾನ ಇಲಾಖೆ ಮಾಹಿತಿಯಂತೆ ಇನ್ನೂ ಎರಡು ದಿನ ಮಲೆನಾಡು ಭಾಗದಲ್ಲಿ ಅಕಾಲಿಕ ಮಳೆ ಬೀಳುವ ಸೂಚನೆ ನೀಡಿದೆ.

ವಿಸ್ಮಯ‌ ನ್ಯೂಸ್ ಶಿರಸಿ

Back to top button