Follow Us On

WhatsApp Group
Uttara Kannada
Trending

ಉತ್ತರಕನ್ನಡದಲ್ಲಿ ಇಂದು 121 ಕೋವಿಡ್ ಕೇಸ್: ಇಬ್ಬರ ಸಾವು: 213 ಮಂದಿ ಗುಣಮುಖ

ಕಾರವಾರ: ಉತ್ತರಕನ್ನಡದಲ್ಲಿ‌ ಇಂದು 121 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದೇ ವೇಳೆ ಇಬ್ಬರು ಕರೊನಾದಿಂದ‌ ಸಾವನ್ನಪ್ಪಿದ್ದಾರೆ.

ಹೊನ್ನಾವರ 21, ಭಟ್ಕಳದಲ್ಲಿ 7, ಶಿರಸಿಯಲ್ಲಿ 18, ಕಾರವಾರದಲ್ಲಿ 4, ಅಂಕೋಲಾದಲ್ಲಿ 8, ಕುಮಟಾದಲ್ಲಿ 31, ಸಿದ್ದಾಪುರದಲ್ಲಿ 2, ಯಲ್ಲಾಪುರದಲ್ಲಿ 23, ಮುಂಡಗೋಡ 2, ಹಳಿಯಾಳದಲ್ಲಿ ಐವರಲಿ ಸೋಂಕು ದೃಢಪಟ್ಟಿದೆ.

ಇಂದಯ ಮುಂಡಗೋಡ 2 ಸಾವು ಸಂಭವಿಸಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 693ಕ್ಕೆ‌ ಏರಿಕೆಯಾಗಿದೆ.

ಹೊನ್ನಾವರ 43, ಭಟ್ಕಳ 10, ಶಿರಸಿ 6, ಸಿದ್ದಾಪುರ 0, ಯಲ್ಲಾಪುರ 10, ಮುಂಡಗೋಡ 9, ಹಳಿಯಾಳ 19, ಕಾರವಾರ 31, ಅಂಕೋಲಾ‌ 16, ಕುಮಟಾ 41, ಜೋಯ್ಡಾ 28 ಜನರು ಕೋವಿಡ್ ನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಅಂಕೋಲಾದಲ್ಲಿಂದು ಹೊಸ ಪಾಸಿಟಿವ್ ಕೇಸ್ 8: ಸಾವು 1

ಅಂಕೋಲಾ ಜೂ 21 : ತಾಲೂಕಿನಲ್ಲಿ ಸೋಮವಾರ 8 ಹೊಸ ಕೋವಿಡ್ ಕೇಸಗಳು ದಾಖಲಾಗಿದ್ದು ಒಟ್ಟೂ 86 ಪ್ರಕರಣಗಳು ಸಕ್ರಿಯವಾಗಿದೆ.

ವಾಹಿನಿ ವರದಿಗಾರ ಸೇರಿಸೋಂಕು ಮುಕ್ತರಾದ 16ಜನರನ್ನು ಬಿಡುಗಡೆ ಗೊಳಿಸಲಾಗಿದೆ. ಒಟ್ಟು 15 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊವಿಡ್ ಕೇರ್ ಸೆಂಟರನಲ್ಲಿ 12, ಹೋಂ ಐಸೋಲೇಶನ್ ನಲ್ಲಿ 59 ಜನರಿದ್ದಾರೆ.

ಶೆಟಗೇರಿ ವ್ಯಾಪ್ತಿಯ 67 ರ ವೃದ್ಧರೊಬ್ಬರು ಕೊವಿಡ್ ನಿಂದ ಮೃತ ಪಟ್ಟಿದ್ದಾರೆ.. ಕಳೆದ 2 ದಿನಗಳ ಹಿಂದಷ್ಟೇ ಕುಟುಂಬ ಸದಸ್ಯರೊಂದಿಗೆ ತಾಲೂಕಾ ಆಸ್ಪತ್ರೆಯ ಕೊವಿಡ್ ವಾರ್ಡಗೆ ದಾಖಲಾಗಿದ್ದರು.

ಹೃದಯ ಸಂಬಂಧಿ ಖಾಯಿಲೆ ಇತ್ತೆನ್ನಲಾದ ಇವರ ಆರೋಗ್ಯದಲ್ಲಿ ಒಮ್ಮೇಲೆ ಏರು ಪೇರಾಗಿ, ಉಸಿರಾಟದ ತೊಂದರೆ ಕಾಣಿಸಿಕೊಂಡು, ಅಕ್ಸಿಜನ್ ನೀಡಿಕೆಯೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಕ್ರಿಮ್ಸ್ ಗೆ ಇಂದು ಅಂಬುಲೆನ್ಸ್ ನಲ್ಲಿ ಸಾಗಿಸಲಾಗಿತ್ತಾದರೂ, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು ಎನ್ನಲಾಗಿದೆ. ಈ ಮೂಲಕ ತಾಲೂಕಿನಲ್ಲಿ ಈ ವರೆಗೆ ಒಟ್ಟೂ 57 ಕೊರೊನಾ ಸಾವಿನ ಪ್ರಕರಣಗಳು ದಾಖಲಾಗಿವೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button