Follow Us On

WhatsApp Group
Uttara Kannada
Trending

ಮಳೆಯ ಅಬ್ಬರ ನಡುವೆ ಮೀನುಗಾರಿಕೆಗೆ: ಅಪಾಯದಲ್ಲಿ ಸಿಲುಕಿದ ಹತ್ತಕ್ಕೂ ಅಧಿಕ ಪಾತಿದೋಣಿಗಳ ರಕ್ಷಣೆ

ಭಟ್ಕಳ: ಮಳೆಯ ಅಬ್ಬರದಲ್ಲೂ ಮೀನುಗಾರಿಕೆ ತೆರಳಿದ ಕೆಲ ಪಾತಿದೋಣಿಗಳು ದಡಕ್ಕೆ ಬರಲು ಸಾಧ್ಯವಾಗದೆ ಸಮುದ್ರದಲ್ಲಿ ಸಿಲುಕಿಕೊಂಡಿರುವ ವೇಳೆ  ಗಿಲ್ನೆಟ್ ದೋಣಿ ಮೂಲಕ ಮೀನುಗಾರನ್ನು ರಕ್ಷಣೆ  ಮಾಡಿ ದಡಕ್ಕೆ ತಂದ ಘಟನೆ ನೆಸ್ತಾರ ಸಮುದ್ರ ತೀರದಲ್ಲಿ ನಡೆದಿದೆ.

ಶನಿವಾರ ರಾತ್ರಿಯಿಂದ ತಾಲೂಕಿನಲ್ಲಿ  ಗಾಳಿ ಸಹಿತ ಮಳೆ  ಸುರಿಯುತ್ತಿದ್ದು, ರವಿವಾರ ಬೆಳಿಗ್ಗೆ ಸುಮುದ್ರ ಅಲೆಗಳ ಉಬ್ಬರ ಇಳಿತದ ಪ್ರಮಾಣ ಕಡಿಮೆ ಇರುವುದರಿಂದ  ಮುಂಡಳ್ಳಿ, ಬೆಳ್ನಿ, ಬಂದರ  ಭಾಗದ ಮೀನುಗಾರರು ಸುಮಾರು ಹತ್ತಕ್ಕೂ ಅಧಿಕ ಪಾತಿದೋಣಿ ಮೀನುಗಾರಿಕೆಗೆ ತೆರಳಿದ್ದರು.‌

ಮೀನುಗಾರಿಕೆ ಮುಗಿಸಿ ಮರಳಿ ಬರುವ ವೇಳೆ ಮಳೆಯ ಆರ್ಭಟದ ಜೊತೆ ಅಲೆಗಳ ಉಬ್ಬರವಿಳಿತ ಹೆಚ್ಚಾಗಿರುವುದರಿಂದ ವಾಪಾಸ್ ಬರಲಾಗದ ತೊಂದರೆ ಸಿಲುಕಿದ್ದು, ಇದನ್ನು ಗಮನಿಸಿದ ಕೆಲವು ಮೀನುಗಾರರನ್ನು ಗಿಲ್ನೆಟ್ ದೋಣಿ ಮೂಲಕ ಅಪಾಯಕ್ಕೆ ಸಿಲುಕಿದ ಮೀನುಗಾರರ ರಕ್ಷಣೆ ಮಾಡಿ ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button