Uttara Kannada

ಜಿಲ್ಲೆಯಲ್ಲಿ ಮತ್ತೆರಡು ಕರೊನಾ ಕೇಸ್: ಯಾವ ಯಾವ ತಾಲೂಕಿನಲ್ಲಿ ದಾಖಲು?

ಉತ್ತರಕನ್ನಡ: ಜಿಲ್ಲೆಗೆ ಮಹಾರಾಷ್ಟ್ರದಿಂದ ಬಂದವರಲ್ಲಿ ಕರೊನಾ ಕಾಣಿಸಿಕೊಳ್ಳುತ್ತಲೇ ಇದ್ದು, ಇಂದು ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂಬ ಮಾಹಿತಿ ಬಂದಿದೆ. ದಾಂಡೇಲಿಯಲ್ಲಿ ಒಂದು ಹಾಗೂ ಕಾರವಾರದಲ್ಲಿ ಒಂದು ಕರೊನಾ ಪ್ರಕರಣ ದೃಢಪಟ್ಟಿದೆ ಎನ್ನಲಾಗಿದೆ. ಮಧ್ಯಾಹ್ನದ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್‍ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ. ಆದ್ರೆ, ಯಾರೂ ಆತಂಕಪಡುವ ಅಗತ್ಯವಿಲ್ಲವಾಗಿದ್ದು, ಸೋಂಕು ದೃಢಪಟ್ಟವರೆಲ್ಲರೂ ಕ್ವಾರಂಟೈನ್‍ನಲ್ಲಿ ಇದ್ದವರೇ ಆಗಿದ್ದಾರೆ ಎನ್ನಲಾಗಿದೆ.

Back to top button