Follow Us On

WhatsApp Group
Uttara Kannada
Trending

ಅಕ್ರಮವಾಗಿ ಬೆಲೆಬಾಳುವ ಕಟ್ಟಿಗೆ ಸಾಗಾಟ: ಕಾರು, ಬೈಕ್ ಸಮೇತ ಆರೋಪಿ ವಶಕ್ಕೆ: ತಲೆ ಮರೆಸಿಕೊಂಡ ನಾಲ್ವರಿಗಾಗಿ ಶೋಧ


ಯಲ್ಲಾಪುರ: ಕಾಯ್ದಿಟ್ಟ ಅರಣ್ಯದಲ್ಲಿ ಬೆಲೆ ಬಾಳುವ ನಾಟಾಗಳನ್ನು ಅಕ್ರಮವಾಗಿ ಕಾರಿನಲ್ಲಿ ತುಂಬುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ, ಆತನಿಂದ ಕಟ್ಟಿಗೆ, ಕಾರು ಹಾಗೂ ಬೈಕ್ ಒಂದನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ವಲಯ ಅರಣ್ಯಾಧಿಕಾರಿಗಳ ವ್ಯಾಪ್ತಿಯ ಸಿಬ್ಬಂದಿ, ಮಳಲಗಾಂವ ಶಾಖಾ ವ್ಯಾಪ್ತಿಯ ಅರಣ್ಯ ಬ್ಲಾಕ್ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.

ಚಂದಗುಳಿ ದೇಸಾಯಿಮನೆ ನಿವಾಸಿ ಆಗ್ನೇಲ್ ಜಾನ್ ಸಿದ್ದಿ ಬಂಧಿತ ಆರೋಪಿಯಾಗಿದ್ದಾನೆ. ಮಾರುತಿ 800 ವಾಹನದಲ್ಲಿ ಕಟ್ಟಿಗೆ ತುಂಬುತ್ತಿರುವ ಸಂದರ್ಭದಲ್ಲಿ ದಸ್ತಗಿರಿ ಮಾಡಿ 10 ಸಾಗವಾನಿ ನಗ 0.348 ಘನ ಮೀಟರ್, 2 ಸೀಸಂ ನಗ 0.070 ಘನ ಮೀಟರ್ ಕಟ್ಟಿಗೆ, ಮಾರುತಿ 800 ವಾಹನ, ಹೀರೋ ಡೀಲಕ್ಸ್ ದ್ವಿಚಕ್ರ ವಾಹನವನ್ನು ಇಲಾಖಾ ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button