Follow Us On

WhatsApp Group
Uttara Kannada
Trending

ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ಪ್ರಕರಣ; 27 ಕಾರ್ಮಿಕರ ವಿರುದ್ಧ ಪ್ರಕರಣ ದಾಖಲು

ಕಾರವಾರ : ಮುದಗಾ ಎನ್ಸಿಸಿ ಕಂಪನಿಯ ಮುಖ್ಯ ಗೇಟ್ ಬಳಿ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ 27 ಕಾರ್ಮಿಕರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.

ಮೇನ್ ಗೇಟ್‌ನಲ್ಲಿ ಪ್ರವೇಶ ಮಾಡುವಾಗ ನೇವಲ್ ಬೇಸ್ ಅಧಿಕಾರಿಗಳ ಆದೇಶದಂತೆ ಎಲ್ಲರ ಬ್ಯಾಗಗಳನ್ನು ಚೆಕ್ ಮಾಡಿ ಒಳಗಡೆ ಬಿಡಲಾಗುತ್ತಿತ್ತು. ಏಕೆ ಬ್ಯಾಗ್ ಚೆಕ್ ಮಾಡುತ್ತಿಯಾ ಎಂದು ಕೆಲ ಕಾರ್ಮಿಕರು ಖ್ಯಾತೆ ತೆಗೆದು ಸೆಕ್ಯೂರಿಟಿ ಗಾರ್ಡ್ ಮೇಲೆ ರಾಡ್ನಿಂದ ಹಲ್ಲೆ ಮಾಡಿದ್ದಾರೆ.

ಇವರನ್ನು ತಪ್ಪಿಸಲು ಹೋದ ಸೆಕ್ಯೂರಿಟಿ ಮೇಲೂ ಅಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು 27 ಮಂದಿ ಕಾರ್ಮಿಕರನ್ನು ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Back to top button