Uttara Kannada
Trending

ನಾಳೆ ಜಿಲ್ಲೆಗೆ ಕಾದಿದ್ಯಾ ಶಾಕ್|ಭಟ್ಕಳ, ಕುಮಟಾದಲ್ಲಿ ಸೋಂಕು ದೃಢ?

ಕಾರವಾರ: ನಾಳೆ (ಶನಿವಾರ ) ಪ್ರಕಟವಾಗುವ ಹೆಲ್ತ್  ಬುಲಟಿನ್ ನಲ್ಲಿ ಜಿಲ್ಲೆಗೆ ಶಾಕ್ ಕಾದಿದೆ ಎನ್ನಲಾಗಿದೆ. ನಾಲ್ಕು ಜನರಿಗೆ ಕರೋನೊ ಇರುವುದು, ಇಂದಿನ ಗಂಟಲು ದ್ರವ ಪರೀಕ್ಷೆಯಿಂದ ದೃಢಪಟ್ಟಿದೆ ಎಂಬ ಮಾಹಿತಿ ಬಂದಿದೆ. ಕುಮಟಾದಲ್ಲಿ ಒಂದು, ಭಟ್ಕಳದಲ್ಲಿ ಮೂವರಿಗೆ ಇಂದಿನ ಗಂಟಲು ದ್ರವದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ನಾಳೆಯ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ನಲ್ಲಿ ಈ ಬಗ್ಗೆ ಅಧಿಕೃತಗೊಳ್ಳಲಿದೆ. ಇದೇ ವೇಳೆ ಇಂದು ಜಿಲ್ಲೆಯಲ್ಲಿ ಒಂದು ಕರೊನಾ ಪ್ರಕರಣ ಪತ್ತೆಯಾಗಿದೆ. ಹಳಿಯಾಳದ ವ್ಯಕ್ತಿಯೊಬ್ಬನಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಇಂದು ಸೋಂಕಿತರ ಸಂಖ್ಯೆ 126ಕ್ಕೆ ಏರಿಕೆಯಾದಂತಾಗಿದೆ.

[sliders_pack id=”1487″]

Back to top button