ಇಂದು ನಿರಾಳರಾದ ಭಟ್ಕಳಿಗರು

[sliders_pack id=”1487″]

ಭಟ್ಕಳ: ತಾಲೂಕಿನಲ್ಲಿ ಒಂದು ವಾರದಿಂದ ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾಗುತ್ತಿದ್ದು, ಅದಕ್ಕೆ ಇಂದು ಬ್ರೇಕ್ ಬಿದ್ದಿದೆ. ತಾಲೂಕಿನಲ್ಲಿ ಇಂದು ಯಾವುದೇ ಪ್ರಕರಣ ಪತ್ತೆಯಾಗಿಲ್ಲವಾಗಿದೆ. ಹೌದು ಭಟ್ಕಳದ ಜನತೆ ಒಂದು ವಾರದಿಂದ ತಾಲೂಕಿನಲ್ಲಿ ಹೆಚ್ಚುತ್ತಿದ್ದ ಕೊರೊನ ಸೋಂಕಿನಿಂದ ಭಯಭೀತರಾಗಿದ್ದರು. ಮನೆಯಿಂದ ಹೊರಗೆ ಬರಲು ಮೂರ್ನಾಲ್ಕು ಬಾರಿ ಯೋಚನೆ ಮಾಡುತ್ತಿದ್ದರು. ಆದರೆ ಕೆಲದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖಗೊಂಡಿದ್ದು ನಿನ್ನೆ ಒಂದು ಪ್ರಕರಣ ಹಾಗೂ ಇಂದು ಯಾವುದೇ ಪ್ರಕರಣ ಪತ್ತೆಯಾಗದಿರುವುದು ಸ್ವಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ನಾಳೆ ಎಷ್ಟು ಎಂಬ ಯೋಚನೆಯಲ್ಲಿ ಕೆಲವರು ತೊಡಗಿಕೊಂದಿದ್ದಂತು ಸುಳ್ಳಲ್ಲ

ವಿಸ್ಮಯ ನ್ಯೂಸ್‌ ಉದಯ್ ಎಸ್ ನಾಯ್ಕ ಭಟ್ಕಳ

Exit mobile version