Important
Trending

ಮಾರ್ಚ್ 27 ರಂದು ಕುಮಟಾದಲ್ಲಿ ಡಿ.ಕೆ. ಶಿ ಸಭೆ, ಗೋಕರ್ಣದಲ್ಲಿ ವಾಸ್ತವ್ಯ: ಮಹಾಬಲೇಶ್ವರನ ದರ್ಶನ ಪಡೆಯಲಿರುವ ಉಪಮುಖ್ಯಮಂತ್ರಿ

ಅಂಕೋಲಾ : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವ ಉಪ ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಮಾರ್ಚ್ 27 ರ ಬುಧವಾರ ಕುಮಟಾದಲ್ಲಿ, ಲೋಕಸಭಾ ಚುನಾವಣೆ ಪೂರ್ವಭಾವಿಯಾಗಿ ಕಾಂಗ್ರೆಸ್ ಪಕ್ಷದ ಸಭೆ ನಡೆಸಲಿದ್ದಾರೆ.

ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಕೊಲ್ಲೂರು ಭೇಟಿ ಬಳಿಕ ಮಾರ್ಚ್ 26 ರ ರಾತ್ರಿ ಗೋಕರ್ಣಕ್ಕೆ ಬಂದು ವಾಸ್ತವ್ಯ ಮಾಡಲಿರುವ ಡಿಕೆಶಿ ಅವರು, ಮಾರ್ಚ್ 27 ರಂದು ಬೆಳಿಗ್ಗೆ ಗೋಕರ್ಣ ಮಹಾಬಲೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಅವರು ಕುಮಟಾಕ್ಕೆ ತೆರಳಿ ಅ ಬೆಳಿಗ್ಗೆ 11.30 ಕ್ಕೆ ಕಾರ್ಯಕರ್ತರನ್ನು ಭೇಟಿಯಾಗಿ ಚುನಾವಣೆ ಕುರಿತು ಚರ್ಚೆ ನಡೆಸಲಿದ್ದಾರೆ.

ಮದ್ಯಾಹ್ನ 1.30ಕ್ಕೆ ಕುಮಟಾದಿಂದ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಲಿದ್ದಾರೆ ಎಂದು ಅವರ ಪ್ರವಾಸ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button