ಕ್ಷುಲ್ಲಕ ವಿಷಯಕ್ಕಾಗಿ ನಡೆಯಿತು ಜಗಳ
ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ಹೊನ್ನಾವರ: ಜಾಗದ ವಿಷಯಕ್ಕೆ ಸಂಬoಧಪಟ್ಟoತೆ ತಮ್ಮ ತನ್ನ ಸ್ವಂತ ಅಕ್ಕಮನ ಮೇಲೇಯೇ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಹೊನ್ನಾವರ ತಾಲೂಕಿನ ಗುಣವಂತೆ ಕೆರೆಮೂಲೆಯಲ್ಲಿ ನಡೆದಿದೆ. ಜಾಗಕ್ಕೆ ಸಂಬoಧಪಟ್ಟoತೆ ಈಗಾಗಲೇ ಪ್ರಕರಣವು ನ್ಯಾಯಾಲಯದಲ್ಲಿದ್ದು, ಈ ಜಾಗದಲ್ಲಿರುವ ಗೇರುಮರವನ್ನು ಕಡಿಯಲಾಗುತ್ತಿತ್ತು. ಇದನ್ನು ಕಂಡ ವೆಂಕಮ್ಮ ಶಿವಾನಂದ ದೇಶಭಂಡಾರಿ ಎನ್ನುವ ಮಹಿಳೆ ಪ್ರಶ್ನೆ ಮಾಡಿದಕ್ಕೆ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ಈ ವೇಳೆ ಸೋದರ ಶಶಿಕಾಂತ ಗಂಗಾಧರ ದೇಶಭಂಡಾರಿ ಮತ್ತು ಅವನ ಪತ್ನಿ ಶಶಿಕಲಾ ದೇಶಭಂಡಾರಿ ಎನ್ನುವವರು, ನೀನು ಯಾರು ನನ್ನನ್ನು ಕೇಳುವವರು ಎಂದು ಅವಾಚ್ಯ ಶಬ್ದಗಳಿಂದ ಬೈದು ಹಲೆ ನಡೆಸಿ, ಕಟ್ಟಿಗೆಯಿಂದ ತಲೆ ಹಾಗೂ ಕೈಗೆ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.
ಈ ಸಂಬoಧ ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ವೆಂಕಮ್ಮನ ಮನೆಯವರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಈ ಸಂದರ್ಭದಲ್ಲಿ ಹಲ್ಲೆಗೋಳಗಾದ ವೆಂಕಮ್ಮ ಶಿವಾನಂದ ದೇಶಭಂಡಾರಿ ಮಾತನಾಡಿ ತಮಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಆರೋಗ್ಯದಲ್ಲಿ ಆಕಸ್ಮಿಕ ಏರುಪೇರು: ಲಕ್ಷ್ಮೇಶ್ವರದ ರವೀಂದ್ರ ಮುರಾರಿ ನಾಯ್ಕ ವಿಧಿವಶ
- ಅಡಿಕೆ ಧಾರಣೆ: ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ದರದ ವಿವರ ಹೇಗಿದೆ ನೋಡಿ?
- ಬಸ್ ನಿಲ್ದಾಣದಲ್ಲಿ ನಿಲ್ಲಿಸಿಟ್ಟ ಬೈಕ್ ಕಳ್ಳತನ: ನಸುಕಿನ ವೇಳೆ ಕೃತ್ಯ?
- ಕರ್ನಾಟಕ ಜ್ಯೂನಿಯರ್ ಅಥ್ಲೆಟಿಕ್ಸ್ ನಲ್ಲಿ ವಿದ್ಯಾರ್ಥಿಗಳ ಸಾಧನೆ
- ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ