Follow Us On

WhatsApp Group
Uttara Kannada
Trending

ಕೇಂದ್ರ ಸಚಿವರ ಕಾಲು, ಕೈಗಳ ಮೂಳೆ ಮುರಿತ: ಈಗ ಅವರ ಆರೋಗ್ಯ ಹೇಗಿದೆ?

ಪಣಜಿ: ಕೇಂದ್ರ ಆಯಷ್ ಸಚಿವ ಗೋವಾದ ಶ್ರೀಪಾದ ನಾಯಕ ಇವರು ಕುಟುಂಬ ಸಮೇತ ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುತ್ತಿರುವ ಮಾರ್ಗ ಮಧ್ಯ ಅಂಕೋಲಾ ತಾಲೂಕಿನ ಹಿಲ್ಲೂರು-ಹೊಸಕಂಬಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಮುಗುಚಿ ಬಿದ್ದ್ ಪರಿಣಾಮ ಸಚಿವ ಪತ್ನಿ ವಿಜಯಾ, ಆಪ್ತ ಕಾರ್ಯದರ್ಶಿ ದೀಪಕ ಗುಮೆ ದುರ್ಮರಣ ಹೊಂದಿದ ಘಟನೆ ನಡೆದಿದಿತ್ತು. ಈ ದುರ್ಘಟನೆಯಲ್ಲಿ ಕೇಂದ್ರ ಸಚಿವರಾದ ಶ್ರೀಪಾದ ನಾಯಕ ಅವರ ಆರೋಗ್ಯ ಗಂಭೀರವಾಗಿತ್ತು. ಆದರೀಗ ಆಸ್ಪತ್ರೆಯ ವೈದ್ಯರ ಮಾಹಿತಿಯಿಂದ ಅವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಶ್ರೀಪಾದ ನಾಯಕ ಅವರ ಎರಡು ಕಾಲು ಮತ್ತು ಕೈಗಳ ಮೂಳೆ ಮುರಿದ್ದಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂಬ ಮಾಹಿತಿ ಬಂದಿದೆ.

ಸೋಮವಾರ ರಾತ್ರಿ ಚಂದಗುಳಿ, ಕವಡಿಕೇರಿ, ಇನ್ನಿತರ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿ ದರ್ಶನ ಪಡೆದು ಗೋಕರ್ಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿತ್ತು. ಅಪಘಾತದ ತೀವ್ರತಗೆ ಕಾರ್ ಸಂಪೂರ್ಣ ನುಜ್ಜಾಗಿತ್ತು.. ಕಾರ್‌ನಲ್ಲಿ ಒಟ್ಟೂ 6 ಜನ ಪ್ರಯಾಣಿಸುತ್ತಿದ್ದರು,

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button