Follow Us On

WhatsApp Group
Uttara Kannada
Trending

ಬಸ್ ಕಾಯುತ್ತಿದ್ದವರಿಗೆ ಕುಡಿದ ಅಮಲಿನಲ್ಲಿ ಗುದ್ದಿದ ಬೈಕ್ ಸವಾರ: 9 ತಿಂಗಳ ಮಗು ಸೇರಿ ಐವರಿಗೆ ಗಂಭೀರ ಗಾಯ

  • ಕುಡಿದ ಅಮಲಿನಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ಅವಾಂತರ
  • ಮೂವರು ಮಕ್ಕಳು ಸೇರಿ ಐವರು ಗಂಭೀರ

ಗೋಕರ್ಣ: ಕುಡಿದ ಅಮಲಿನಲ್ಲಿ ಬೈಕ್ ಚಲಾಯಿಸಿಕೊಂಡು ಬಂದ ವ್ಯಕ್ತಿಯೋರ್ವ ಆಸ್ಪತ್ರೆಗೆ ತೆರಳಲು ಬಸ್ ಗೆ ಕಾಯುತ್ತಿದ್ದವರ ಮೇಲೆ ಬೈಕ್ ಹರಿಸಿದ ಪರಿಣಾಮ ಮೂವರು ಮಕ್ಕಳು ಸಹಿತ ಐವರು ಗಂಭೀರ ಗಾಯಗೊಂಡಿರುವ ಘಟನೆ ಗೋಕರ್ಣದ ಗಂಗಾವಳಿ ಬಳಿ ಇಂದು ಸಂಜೆ ನಡೆದಿದೆ.

ಉದಯ ನಾಯ್ಕ (10), ಶೇಖರ‌ ನಾಯ್ಕ(14), ಪ್ರಮೀಳಾ ಶೇಖರ್ ನಾಯ್ಕ (45), ಸುರೇಶ ನಾಯ್ಕ ಎಂಬ 9 ತಿಂಗಳ ಮಗು ಹಾಗೂ ಬೈಕ್ ಸವಾರ ರಾಘವೇಂದ್ರ ಗೌಡ ಗಂಭೀರ ಗಾಯಗೊಂಡಿದ್ದಾರೆ.‌ ಬೈಕ್ ಸವಾರ ಕುಡಿದು ಮೊಬೈಲ್ ನಲ್ಲಿ ಮಾತನಾಡುತ್ತಾ ಬಂದು ರಸ್ತೆ ಬದಿ ನಿಂತಿದ್ದವರಿಗೆ ಗುದ್ದಿದ್ದಾನೆ ಎನ್ನಲಾಗಿದ್ದು ಪರಿಣಾಮ 9 ತಿಂಗಳ ಮಗು ಸೇರಿ ಐವರು ಗಂಭೀರ ಗಾಯಗೊಂಡಿದ್ದರು.

ತಕ್ಷಣ ಸ್ಥಳೀಯರು ಆಂಬುಲೆನ್ಸ್ ಮೂಲಕ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿದ್ದರು. ಪ್ರಾಥಮಿಕ ಚಿಕಿತ್ಸೆ ಬಳಿಕ ಮಗುವನ್ನು ಗೋವಾದ ಬಾಂಬೋಲಿಗೆ ಕೊಂಡೊಯ್ದಿದ್ದು ಉಳಿದ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಸ್ಮಯ‌ ನ್ಯೂಸ್ ಗೋಕರ್ಣ

ಇದನ್ನೂ ಓದಿ

Back to top button