Follow Us On

WhatsApp Group
Uttara Kannada
Trending

ಜಗದೀಶ ಅನಂತ ನಾಯಕ ಶೀಳ್ಯ ಅವರ ಶ್ರದ್ಧಾಂಜಲಿ ಸಭೆ

ಅಂಕೋಲಾ: ಜಗದೀಶ ಅನಂತ ನಾಯಕ ಶೀಳ್ಯ ಇವರು ಇತ್ತೀಚೆಗೆ ನಿಧನರಾದ ಹಿನ್ನಲೆಯಲ್ಲಿ ಬಾಸಗೋಡದ ನಡುಬೇಣ ವೇದಿಕೆಯಲ್ಲಿ ಜನತಾ ಕ್ರಿಕೆಟ್ ಕ್ಲಬ್ ವತಿಯಿಂದ ರವಿವಾರ ಶೃದ್ಧಾಂಜಲಿ ಸಭೆ ನಡೆಸಲಾಯಿತು.

ಸರಳವಾಗಿ ನಡೆದ ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಮೌನಾಚರಣೆ ಮೂಲಕ ಅಗಲಿದ ದಿವ್ಯಾತ್ಮಕ್ಕೆ ಶಾಂತಿ ಕೋರಲಾಯಿತು. ನಂತರ ಕ್ಲಬ್ಬಿನ ಹಿರಿ-ಕಿರಿಯ ಸದಸ್ಯರು, ಊರ ಹಾಗೂ ಪರ ಊರಿನ ಕೆಲ ಗ್ರಾಮಸ್ಥರು , ಜಗದೀಶ ನಾಯಕ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸೂಚಿಸಿದರು.

ಕ್ಲಬ್ಬಿನ ಹಿರಿಯ ಸದಸ್ಯರಾದ ಪ್ರದೀಪ ನಾಯಕ, ಹೊನ್ನಪ್ಪ ನಾಯಕ, ರಾಮಮೂರ್ತಿ ನಾಯಕ ಮತ್ತಿತರರು, ಕ್ರಿಕೆಟ್ ಕ್ಲಬ್ ಮತ್ತು ಜಗದೀಶ ನಾಯಕ ಕುಟುಂಬ ವರ್ಗದೊಂದಿಗಿನ ಅವಿನಾಭಾವ ಸಂಬಂಧ ತಿಳಿಸಿ,4 ದಶಕಗಳಿಂದ ಕ್ಲಬ್ಬಿನ ಪ್ರೇರಣಾದಾಯಕ ಶಕ್ತಿಯಾಗಿ ಜಗದೀಶ ನಾಯಕರು ನೀಡಿದ ತನು- ಮನ- ಧನ ಸಹಕಾರವನ್ನು ಭಾವಪೂರ್ಣವಾಗಿ ಸ್ಮರಿಸಿದರು.

ಪ್ರಮುಖರಾದ ಲಕ್ಷೀಧರ ನಾಯಕ, ಗುರುಪ್ರಸಾದ ನಾಯಕ,ಯೋಗೀಶ ನಾಯಕ, ವೆಂಕಟ್ರಮಣ ನಾಯಕ, ಪ್ರಕಾಶ ನಾಯಕ, ಮಧುಕರ ನಾಯಕ, ರಜತ ನಾಯಕ, ಗೋಕುಲ ನಾಯಕ, ಭರತರಾಜ ಗಾಂವಕರ, ಅಮೋಘ ನಾಯಕ, ಸುದೀಪ ನಾಯಕ, ಮಂಜುನಾಥ ನಾಯಕ, ವೈಭವ ನಾಯಕ ಇತರರು ಉಪಸ್ಥಿತರಿದ್ದು ಅಗಲಿದ ಹಿರಿಯ ಚೇತನಕ್ಕೆ ಗೌರವ ಸೂಚಿಸಿದರು. ದೇವಾನಂದ ಗಾಂವಕರ ನಿರೂಪಿಸಿದರು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button