Follow Us On

WhatsApp Group
ಮಾಹಿತಿ
Trending

ಈಜಲು ತೆರಳಿದ ವಿದ್ಯಾರ್ಥಿ ನೀರುಪಾಲು: ಮುಂದುವರಿದ ಶೋಧ ಕಾರ್ಯ

ಗೋಕರ್ಣ: ಸಮುದ್ರದಲ್ಲಿ ಈಜಲು ತೆರಳಿದ್ದ ಬೆಂಗಳೂರು ಮೂಲದ ಪ್ರವಾಸಿಗನೊಬ್ಬ ನೀರು ಪಾಲಾದ ಘಟನೆ ತಾಲೂಕಿನ ಗೋಕರ್ಣದ ರುದ್ರಪಾದ ಸಮುದ್ರದಲ್ಲಿ ರವಿವಾರ ನಡೆದಿದೆ.ಬೆಂಗಳೂರು ಮೂಲದ ನಿವಾಸಿ ರವಿನಂದನ (23) ನೀರು ಪಾಲಾದ ಪ್ರವಾಸಿಗ ಎಂಬ ಮಾಹಿತಿ ದೊರೆತಿದೆ.

ಈತ ಗೆಳೆಯರ ಜೊತೆ ಗೋಕರ್ಣಕ್ಕೆ ಪ್ರವಾಸಕ್ಕೆಂದು ಆಗಮಿಸಿ, ಗೋಕರ್ಣದ ರುದ್ರಪಾದ ಸಮುದ್ರಕ್ಕೆ ಈಜಲು ಹೋದಾಗ ಅಲೆಯ ರಭಸಕ್ಕೆ ಕೊಚ್ಚಿ ನೀರು ಪಾಲಾಗಿದ್ದಾನೆ. ಈತ ಸಿ.ಎ ಅಭ್ಯಾಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಗೋಕರ್ಣ ಪಿ.ಎಸ್.ಐ ನವೀನ ನಾಯ್ಕ ಹಾಗೂ ಕರಾವಳಿ ಕಾವಲು ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ, ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವಿಸ್ಮಯ ನ್ಯೂಸ್, ಗೋಕರ್ಣ

Back to top button