Follow Us On

WhatsApp Group
Uttara Kannada
Trending

ಅರಣ್ಯಶಾಸ್ತ್ರ ಪದವಿಯಲ್ಲಿ ಬಂಗಾರದ ಪದಕ: ಶಿರಸಿ ಯುವತಿಯ ಸಾಧನೆ

ಶಿರಸಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ 34ನೇ ಘಟಿಕೋತ್ಸವ ಸಮಾರಂಭದಲ್ಲಿ ಶಿರಸಿಯ ಪ್ರತೀಕ್ಷಾ ಪ್ರಕಾಶ ಗಾಂವಕರ ಚಿನ್ನದ ಪದಕ ಪಡೆದಿದ್ದಾರೆ. ಬಿಎಸ್ಸಿ-ಅರಣ್ಯಶಾಸ್ತ್ರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಪಡೆದು ಕೊಂಡಿದ್ದಾರೆ. ಪ್ರತೀಕ್ಷಾ ಗಾಂವಕರ ನಿವೃತ್ತ ಪೊಲೀಸರಾದ ಪ್ರಕಾಶ್ ಗಾಂವಕರ ಹಾಗೂ ಪೂಜಾ ಗಾಂವಕರ ಅವರ ಪುತ್ರಿಯಾಗಿದ್ದು, ಕುಟುಂಬಸ್ಥರು ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button